ಕೆ. ಕಲ್ಯಾಣ್ ಬದುಕಿನಲ್ಲಿ ಬಿರುಕು ಮೂಡಿಸಿದ ಗಂಗಾ ಕುಲಕರ್ಣಿ ಆತ್ಮಹತ್ಯೆ

ಕೊಪ್ಪಳ, ಅ. 29: ಗೀತ ರಚನೆಕಾರ ಕೆ. ಕಲ್ಯಾಣ್‌ ಡೈವೋರ್ಸ್‌ ವಿಚಾರಕ್ಕೆ ಸಂಬಂಧಿಸಿದಂತೆ ಕುಷ್ಟಗಿ ಪಟ್ಟಣದ ನ್ಯಾಯಾಲಯದಲ್ಲಿ ಅವರ ಬಾಳಲ್ಲಿ ಬಿರುಕು ಮೂಡಿಸಿದ ಗಂಗಾ ಕುಲಕರ್ಣಿ ವಿಷ ಕುಡಿದು ಸಾವನಪ್ಪಿದ್ದಾಋಎ ಎಂದು ತಿಳಿದು ಬಂದಿದೆ.

ಕೆ. ಕಲ್ಯಾಣ ಬದುಕಿನಲ್ಲಿ ಆಟವಾಡಿದ್ದ ಗಂಗಾ ಅಲಿಯಾಸ್ ಜ್ಯೋತಿ ಕುಲಕರ್ಣಿ ಅವರು ಕಲ್ಯಾಣ್ ಅವರ ಪತ್ನಿಗೆ ಮಾಟಮಂತ್ರ ಮಾಡಿ, ಆಸ್ತಿ ಕಬಳಿಸಿದ್ದ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾರೆ. ಕುಷ್ಟಗಿ ನ್ಯಾಯಲಯಕ್ಕೆ ಹಾಜರಾಗಿದ್ದ ಈಕೆ ವಿಷ ಸೇವಿಸಿ ನ್ಯಾಯಾಲಯ ಪ್ರವೇಶ ಮಾಡಿದ್ದಾಳೆ. ಅಲ್ಲಿಯೇ ಕುಸಿದುಬಿದ್ದು ಸಾವನ್ನಪ್ಪಿದ್ದಾಳೆ.

ಕುಷ್ಟಗಿ ತಾಲೂಕಿನ ಕ್ಯಾದಿಗುಂಪಾ ಗ್ರಾಮದಲ್ಲಿ ತೋಟಗಾರಿಕೆ ವಿವಿಯಲ್ಲಿ ಉದ್ಯೋಗ ಕೊಡಿಸುವುದಾಗಿ ಲಕ್ಷಾಂತರ ರೂ. ಹಣ ಪಡೆದಿದ್ದಳು. ಆದರೆ ಕೆಲ ದಿನ ಕಳೆದರೂ ಉದ್ಯೋಗ ಸಿಗದ ವೇಳೆ ಹಣ ಕೊಟ್ಟವರು 2016ರಲ್ಲಿ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಕುಷ್ಟಗಿ ನ್ಯಾಯಾಲಯಕ್ಕೆ ವಿಚಾರಣೆಗೆ ಆಗಮಿಸಿದ್ದಳು.

Exit mobile version