ಗೆಲುವಿನ ನಂತರ ಮುನಿರತ್ನ ಮಾತು

ಬೆಂಗಳೂರು, ನ. 10: ಗೆಲುವು ಸಾಧಿಸಿಕೊಂಡ ನಂತರ ಮುನಿರತ್ನ ಅವರು ಮಾತನಾಡಿ ನನಗೆ ಸಚಿವ ಸ್ಥಾನ ನೀಡುವುದು ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪನವರಿಗೆ ಬಿಟ್ಟಂತಹ ವಿಚಾರವಾಗಿದೆ. ಅವರು ಯಾವುದೇ ಸಚಿವ ಸ್ಥಾನ ನೀಡಿದರೂ ನಿಭಾಯಿಸಿಕೊಂಡು ಮುನ್ನಡೆಯುವೆ. ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಕಾರಣರಾದಂತ ಮತದಾರರಿಗೆ ಧನ್ಯವಾದಗಳು. ಕ್ಷೇತ್ರದ ಮತದಾರರ ಋಣ ತೀರಿಸುವಂತೆ ಕೆಲಸ ಮಾಡುವುದಾಗಿ ಆರ್ ಆರ್ ನಗರದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದಂತಹ ಬಿಜೆಪಿ ಅಭ್ಯರ್ಥಿ ಮುನಿರತ್ನ ತಿಳಿಸಿದ್ದಾರೆ.

 ಬಿಜೆಪಿ ಪಕ್ಷದಲ್ಲಿ ಭರ್ಜರಿ ಗೆಲುವು ಸಿಕ್ಕಿದ ಬಳಿಕ ವಿಜಯದ ನಗೆ ಬೀರಿದ  ಮುನಿರತ್ನ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ದಿನದ 20 ಗಂಟೆ ಕ್ಷೇತ್ರದಲ್ಲಿ ಅಭಿವೃದ್ಧಿಯ ಕೆಲಸ ಮಾಡುವೆ. ಕ್ಷೇತ್ರದ ಜನರ ಋಣವನ್ನು ತೀರಿಸುವಂತಹ ಕೆಲಸವನ್ನು ಮಾಡುವುದಾಗಿ  ಹೇಳಿದರು.

ಇದೇ ಸಂದರ್ಭದಲ್ಲಿ ಸಚಿವ ಸ್ಥಾನದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನನಗೆ ಸಚಿವಸ್ಥಾನ ನೀಡುವುದು, ಬಿಡೋದು ಸಿಎಂಗೆ ಬಿಟ್ಟ ವಿಚಾರವಾಗಿದೆ. ಅವರು ಯಾವುದೇ ಸಚಿವಸ್ಥಾನ ನೀಡಿದರೂ ನಿಭಾಯಿಸಿಕೊಂಡು ಹೋಗುತ್ತೇನೆ. ಒಂದು ವೇಳೆ ಸಚಿವ ಸ್ಥಾನ ನೀಡದಿದ್ದರೂ ಒಬ್ಬ ಸಾಮಾನ್ಯ ಬಿಜೆಪಿ ಕಾರ್ಯಕರ್ತನಾಗಿ ಕ್ಷೇತ್ರದಲ್ಲಿ ಅಭಿವೃದ್ಧಿಯ ಕೆಲಸ ಮಾಡುವುದಾಗಿ ಸುದ್ದಿಗಾರರ ಜೊತೆ ಮಾತನಾಡಿದರು.

Exit mobile version