ಡಿಕೆಶಿ ಪದಗ್ರಹಣಕ್ಕೆ ಅಸ್ತು ಅಂದ ರಾಜ್ಯ ಸರ್ಕಾರ

 ಕೆಪಿಸಿಸಿ ಅಧ್ಯಕ್ಷ  ಸ್ಥಾನಕ್ಕೆ ಡಿ.ಕೆ ಶಿವಕುಮಾರ್  ಆಯ್ಕೆಯಾಗಿ ದಿನಗಳೇ ಕಳೆದು ಹೋಗಿದೆ. ಕೋರೋನಾ ಕಾರಣದಿಂದಾಗಿ  ಪದಗ್ರಹಣ ಕಾರ್ಯಕ್ರಮಕ್ಕೆ ಅಡ್ಡಿಯಾಗುತ್ತಲಿತ್ತು ಕೋವಿಡ್‌-19 ಮಾರ್ಗಸೂಚಿಯ ಪ್ರಕಾರ ಜೂನ್ 14 ರಂದು ನಡೆಯಬೇಕಾಗಿದ್ದ ಕಾರ್ಯಕ್ರಮಕ್ಕೆ ಅನುಮತಿಯನ್ನೂ  ನಿರಾಕರಣೆ ಮಾಡಲಾಗಿತ್ತು…ಆದ್ರೆ ಇದೀಗ  ರಾಜ್ಯ ಸರ್ಕಾರ  ಪದಗ್ರಹಣಕ್ಕೆ ಅನುಮತಿಯನ್ನು ನೀಡಿದೆ. ಇದೀಗ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರು ಕಾರ್ಯಕ್ರಮ ನಡೆಸಲು ಅನುಮತಿ ನೀಡಿದ್ದಾರೆ. ಆದರೆ ಕೆಲವೊಂದು ಶರತ್ತುಗಳನ್ನು ಪಾಲನೆ ಮಾಡುವಂತೆ ಸೂಚನೆ ನೀಡಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಡಿಕೆಶಿ ಪದಗ್ರಹಣಕ್ಕೆ ಸರ್ಕಾರದ  ಯಾವ ಅಭ್ಯಂತರನೂ ಇಲ್ಲ . ಕೊರೋನಾ ಸೋಂಕು  ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರೋ ಹಿನ್ನಲೆ  ಹೆಚ್ಚಿನ ಜನರನ್ನು ಪದಗ್ರಹಣಕ್ಕೆ ಸೇರಿಸಬಾರದು  ಮುನ್ನಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಹೀಗೆ ಕೆಲ ವಿಷಯಗಳ  ಕುರಿತುಈ ಗಾಗಲೇ ಅವರ ಜೊತೆ ಮಾತನಾಡಿದ್ದೇನೆ ಎಂದು ತಿಳಿಸಿದ್ದಾರೆ .

ಡಿ.ಕೆ ಶಿವಕುಮಾರ್ ಪದಗ್ರಹಣಕ್ಕೆ ಎರಡು ಬಾರಿ ಅನುಮತಿಯನ್ನು ಸಕರ್ಕಾರ ನಿರಾಕರಣೆ ಮಾಡಿದ್ದು  ; ಸರ್ಕಾರದ ನಡೆಯನ್ನು  ರಾಜಕೀಯ ದುರುದ್ದೇಶ ಎಂದು ಕಾಂಗ್ರೆಸ್ ಪರಿಗಣಿಸಿ ಆಕ್ರೋಶ ವ್ಯಕ್ತಪಡಿಸಿತ್ತು. ಜೊತೆಗೆ ಕೇಂದ್ರ ಗೃಹ ಸಚಿವ  ಅಮಿತ್ ಶಾ ವಚರ್ಚುವಲ್ ರ್ಯಾಲಿಗೆ  ಅನುಮತಿ ನೀಡೋದಾದ್ರೆ ನಮಗೆ ಯಾಕೆ ಅನುಮತಿ ನೀಡಲ್ಲ ಅನ್ನೋದು ಪ್ರಶ್ನಿಸಿ, ಜೂನ್ 14 ರಂದು ರಾಜ್ಯದ್ಯಂತ ಆನ್‌ಲೈನ್ ಮೂಲಕ ಕಾರ್ಯಕ್ರಮ ನಡೆಸಲು ಡಿಕೆಶಿ ಸಿದ್ದತೆ ಮಾಡಿಕೊಂಡಿದ್ದರು.ಆದ್ರೆ ಕೊನೆ ಗಳಿಗೆಯಲ್ಲಿ ಅನುಮತಿಯನ್ನು ನಿರಾಕರಿಸಿತ್ತು.. ಮತ್ತೆ ಇದೀಗ ಕೆಲ ಷರತ್ತುಗಳನ್ನು ವಿಧಿಸೋದರ ಮೂಲಕ  ಪದಗ್ರಹಣಕ್ಕೆ ಅವಕಾಶ ನೀಡಲಾಗಿದೆ

Exit mobile version