ಪರಿಷತ್‍ಗೆ ಐವರ ನಾಮನಿರ್ದೇಶನ

ವಿಧಾನಪರಿಷತ್‌ ನ ಐದು ನಾಮನಿರ್ದೇಶಿತ ಸ್ಥಾನಗಳಿಗೆ ಮಾಜಿ ಸಚಿವ ಎ.ಎಚ್‌.ವಿಶ್ವನಾಥ್‌ ಸೇರಿ ಐವರು ಆಯ್ಕೆಯಾಗಿದ್ದಾರೆ. ಸಿ.ಪಿ.ಯೋಗೇಶ್ವರ್‌, ತಲ್ವಾರ್‌ ಸಾಬಣ್ಣ, ಭಾರತಿ ಶೆಟ್ಟಿ, ಗುರುರಾಜ ಕರ್ಜಗಿ ಹಾಗೂ ಶಾಂತಾರಾಮ್‌ ಸಿದ್ದಿ ಅವರನ್ನೂ ಪರಿಷತ್‌ ಗೆ ನಾಮ ನಿರ್ದೇಶನ ಮಾಡಲಾಗಿದೆ. ಐದೂ ಜನರ ಪಟ್ಟಿಗೆ ರಾಜ್ಯಪಾಲ ವಜೂಭಾಯಿ ವಾಲಾ ಅಂಕಿತ ಹಾಕಿದ್ದಾರೆ.


ಪಕ್ಷಾಂತರ ಮಾಡಿದ್ದರಿಂದಾಗಿ ಅನರ್ಹಗೊಂಡಿದ್ದ ಶಾಸಕರಲ್ಲಿ ಒಬ್ಬರಾಗಿದ್ದ ಎ.ಎಚ್‌.ವಿಶ್ವನಾಥ್‌ ಉಪಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಲ್ಲಿ ಪರಾಭವಗೊಂಡಿದ್ದರು. ಅನಂತರ ವಿಧಾನಸಭೆಯಿಂದ ಆಯ್ಕೆಯಾಗುವ ಪರಿಷತ್‌ ಸ್ಥಾನಕ್ಕೆ ಬೇಡಿಕೆ ಸಲ್ಲಿಸಿದ್ದರು. ಆದರೆ ಬಿಜೆಪಿ ಹೈಕಮಾಂಡ್‌ ವಿಶ್ವನಾಥ್‌ ಗೆ ಆಗ ಮಣೆ ಹಾಕಿರಲಿಲ್ಲ. ಈಗ ಕೊನೆಗೂ ವಿಶ್ವನಾಥ್‌ ಪರಿಷತ್‌ ಗೆ ನಾಮನಿರ್ದೇಶನಗೊಂಡಿದ್ದಾರೆ.

Exit mobile version