ಮಳೆಯ ಆರ್ಭಟಕ್ಕೆ 20 ಅಡಿ ಗೋಡೆ ಕುಸಿತ

ಸೋಲಾಪುರ,.16: ಕುಂಭದ್ರೋಣ ಮಳೆಯಿಂದಾಗಿ ಮಹರಾಷ್ಟ್ರ ತತ್ತರಿಸಿ ಹೋಗಿದ್ದು. ಫಂಡರಾಪುರದಲ್ಲಿ ಮಳೆ ಪ್ರವಾಹಕ್ಕೆ 20 ಅಡಿ ಎತ್ತರದ ಗೋಡೆಯೊಂದು ಕುಸಿದ ಘಟನೆ ನಡೆದಿದೆ.

ಭೀಮಾ ನದಿಯ ನಿರ್ಮಾಣ ಹಂತದಲ್ಲಿರುವ ಘಾಟ್ ಕುಸಿತವಾಗಿದ್ದು, ಮಳೆಯಿಂದ ತಪ್ಪಿಸಿಕೊಳ್ಳಲು ಗೋಡೆಯ ಬಳಿ ನಿಂತಿದ್ದ ಯಾತ್ರಿಕರು ಘಟನೆಯಲ್ಲಿ ಅಸುನೀಗಿದ್ದಾರೆ. ಇಂದು ಸಂಭವಿಸಿದ ಘಟನೆಯಲ್ಲಿ ಆರು ಮಂದಿ ಮೃತರಾಗಿದ್ದು, ಮಂಗೇಶ್ ಅಭಂಗ್ ರಾವ್, ರಾಧಾ ಅಭಂಗ್ ರಾವ್, ಗೋಪಾಲ್ ಅಭಂಗ್ ರಾವ್, ಪಿಲ್ಲೂ ಜಗಪತ್ ಎಂದು ಗುರುತಿಸಲಾಗಿದೆ. ಮತ್ತಿಬ್ಬರ ಗುರುತು ಪತ್ತೆಯಾಗಿಲ್ಲ ಎಂದು  ಫಂಡರಾಪುರ ಉಪವಿಭಾಗಾಧಿಕಾರಿ ಸಚಿನ್ ಢೋಲೆ ಹೇಳಿದ್ದಾರೆ.

ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದರೂ ಕೆಲವು ಭಾಗದಲ್ಲಿ ಇನ್ನೂ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಈವರೆಗೆ 17 ಸಾವಿರಕ್ಕೂ ಹೆಚ್ಚು ಜನರನ್ನು ಬೇರೆಡೆ ಸ್ಥಳಾಂತರಿಸಲಾಗಿದೆ. ಫಂಡರಾಪುರ ಒಂದರಲ್ಲೇ 10 ಸಾವಿರಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರಿಸಲಾಗಿದೆ.

Exit mobile version