ಮಾಜಿ ಮುಖ್ಯಮಂತ್ರಿಗೆ ತಿರುಗೇಟು ನೀಡಿದ ಸಚಿವ ಸಿ.ಟಿ ರವಿ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ  ಕೋವಿಡ್ ೧೯ ಭ್ರಷ್ಟಾಚಾರ ವಿಚಾರ ಹೇಳಿಕೆಗೆ ಸಂಬಂಧಪಟ್ಟಂತೆ  ಸಚಿವರಾದ ಸಿಟಿ ರವಿ ಪ್ರತಿಕ್ರಿಯಿಸಿದ್ದಾರೆ . ಕಾಂಗ್ರೆಸ್ ಸರ್ಕಾರದಲ್ಲೂ ಕೋಟ್ಯಾಂತರ ಹಣ ಲೂಟಿಯಾಗಿದೆ ಅನ್ನೋ ಮೂಲಕ  ಸಿದ್ದರಾಮಯ್ಯ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

ಹಾಸಿಗೆ- ದಿಂಬು ಹಗರಣದಲ್ಲಿ  ಹಣ ಲೂಟಿ ಮಾಡಿದ್ದಾರೆ. ಅವರಿಗೆ ಬರೀ  ಇಂಥವೇ  ಕಾಣುತ್ತಾ ಅಂತ ಪ್ರಶ್ನೆ ಮಾಡಿದ್ದಾರೆ . ಕಾಂಗ್ರೆಸ್ ನವರು ಬರೀ ಇಂಥಹ ಸುಳ್ಳುಗಳನ್ನೇ ಹೇಳೋ ಮೂಲಕ  ಸುಳ್ಳನೇ ಮನೆ ದೇವರನ್ನಾಗಿ ಮಾಡಿಕೊಂಡಿದ್ದಾರೆ . ಅಂದಹಾಗೆ  ಪ್ರಾರಂಭದಲ್ಲಿ ಸರ್ಜಿಕಲ್ ಮಾಸ್ಕ್ ಮಾತ್ರ ಇದ್ದಿದ್ದು  ಅಂಥಹ ಸಂದರ್ಭದಲ್ಲಿ  ಬೇರೆ ಕಡೆಯಿಂದ ಮಾಸ್ಕ್ , ಪಿಪಿಇ  ಕಿಟ್ ಖರೀದಿ ಮಾಡುವ ಅನಿವಾರ್ಯ ಇತ್ತು. ಇದರಲ್ಲಿ ಹುಳುಕು ಹುಡುಕೋದು  ಸರಿಯಲ್ಲ ಎಂದು  ವಿಧಾನಸೌಧದಲ್ಲಿ  ಸಚಿವ ಸಿಟಿ ರವಿ ಹೇಳಿಕೆ ನೀಡಿದ್ದಾರೆ

Exit mobile version