ರಚಿತಾ ಬದಲಿಗೆ ಶಾನ್ವಿ..!

ಕಸ್ತೂರಿ ನಿವಾಸ ಹೆಸರಲ್ಲಿ ಮಾಧ್ಯಮಗೋಷ್ಠಿ ನಡೆದಾಗ ಆ ಚಿತ್ರಕ್ಕೆ ರಚಿತಾ ರಾಮ್ ನಾಯಕಿಯಾಗಿದ್ದರು. ಆದರೆ ಈಗ ಚಿತ್ರದ ಹೆಸರು ಬದಲಾಗಿದೆ. ಕಸ್ತೂರಿ ಮಹಲ್ ಎನ್ನುವ ಈ ಚಿತ್ರದಿಂದ ರಚಿತಾ ಹೊರಗೆ ನಡೆದಿರುವುದು ಈಗಾಗಲೇ ಹಳೆಯ ವಿಷಯ. ಹೊಸ ಸುದ್ದಿ ಏನು ಅಂದರೆ, ಅಕ್ಟೋಬರ್‌ನಲ್ಲಿ ಚಿತ್ರೀಕರಣ ಆರಂಭಿಸಲಿರುವ ಚಿತ್ರದಲ್ಲಿ ನಾಯಿಯಾಗಲು ಶಾನ್ವಿ ಶ್ರೀವಾಸ್ತವ್ ಒಪ್ಪಿಕೊಂಡಿದ್ದಾರೆ.

`ಅವನೇ ಶ್ರೀಮನ್ನಾರಾಯಣ’ ಚಿತ್ರದಿಂದ ಪರಭಾಷೆಗಳಲ್ಲಿಯೂ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿರುವ ತಾರೆ ಶಾನ್ವಿ. ತಮ್ಮ ಕನ್ನಡದ ಮೊದಲ ಚಿತ್ರವಾದ ಚಂದ್ರಲೇಖದಲ್ಲೇ ಹಾರರ್ ಪಾತ್ರದ ಮೂಲಕ ಗಮನ ಸೆಳೆದಿದ್ದ ಶಾನ್ವಿಗೆ ಈಗ ಮತ್ತೊಮ್ಮೆ ಅಂಥದೊಂದು ಪಾತ್ರ ನಿರ್ವಹಿಸುವ ಅವಕಾಶ ದೊರಕಿದೆ. ದಿನೇಶ್ ಬಾಬು ಅವರಂಥ ಹಿರಿಯ ನಿರ್ದೇಶಕರ ಜತೆಗಿನ ಕಾಂಬಿನೇಶನ್ ಹೇಗೆ ಮೂಡಿ ಬರಲಿದೆ ಎನ್ನುವುದನ್ನು ಮುಂದಿನ ದಿನಗಳು ಹೇಳಲಿವೆ.

ಚಿತ್ರಕ್ಕೆ ನಿರ್ದೇಶಕ ದಿನೇಶ್ ಬಾಬು ‌ಅವರೇ ಕತೆ, ಚಿತ್ರಕತೆ,ಸಂಭಾಷಣೆ ಬರೆದಿದ್ದಾರೆ. ಇದು ಅವರ ನಿರ್ದೇಶನದ 50ನೇ ಚಿತ್ರ.
ಅಕ್ಟೋಬರ್ 5ರಿಂದ ಕಸ್ತೂರಿ ಮಹಲ್‌ ಗೆ ಕೊಟ್ಟಿಗೆಹಾರದಲ್ಲಿ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ.

ಶ್ರೀಭವಾನಿ‌ ಆರ್ಟ್ಸ್ ಹಾಗೂರು ಬಿನ್ ರಾಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ರವೀಶ್ ಆರ್ ಸಿ ಹಾಗೂ ರುಬಿನ್ ರಾಜ್ ಅವರು ನಿರ್ಮಿಸುತ್ತಿರುವ‌ ಈ ಚಿತ್ರಕ್ಕೆ ಪಿ.ಕೆ.ಎಚ್ ದಾಸ್ ಛಾಯಾಗ್ರಹಣ ಹಾಗೂ ಸೌಂದರ್ ರಾಜ್ ಅವರ ಸಂಕಲನವಿದೆ. ಶಾನ್ವಿ ಶ್ರೀವಾಸ್ತವ್, ಸ್ಕಂದ ಅಶೋಕ್, ರಂಗಾಯಣ ರಘು, ನಾರಾಯಣ ಸ್ವಾಮಿ, ಶ್ರುತಿ ಪ್ರಕಾಶ್, ಕಾಶಿಮಾ, ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Exit mobile version