ರಾಜ್ಯ ಪೋಲೀಸ್‌ ಇಲಾಖೆಯಲ್ಲಿ ಬಂಡಾಯ ಸ್ಫೋಟ

ಬೆಂಗಳೂರು, ಅ. 29: ರಾಜ್ಯ ಪೋಲೀಸ್‌ ಇಲಾಖೆಯಲ್ಲಿ ಬಂಡಾಯ ಸ್ಫೋಟಗೊಂಡಿದ್ದು, ಅದಕಕೆ ಸಾಕ್ಷಿಯೆಂಬಂತೆ ಎಡಿಜಿಪಿ ರವೀಂದ್ರ ನಾಥ್ ರಾಜೀನಾಮೆ ನೀಡಿದ್ದಾರೆ. ಸುನೀಲ್ ಕುಮಾರ್ ಅವರಿಗೆ ರಾಜ್ಯ ಸರ್ಕಾರ ಬಡ್ತಿ ನೀಡುತ್ತಿದ್ದಂತೆ ಅಸಮಾಧಾನಗೊಂಡ ಎಡಿಜಿಪಿ ರವೀಂದ್ರನಾಥ್‌ ರಾಜಿನಾಮೆ ಅನೇಕ ಪ್ರಶ್ನೆಗಳಿಗೆ ಎಡೆ ಮಾಡಿಕೊಟ್ಟಿದೆ.

ರಾಜ್ಯ ಸರ್ಕಾರದವು ನನ್ನ ಮನವಿಯನ್ನು ತಿರ್ಕರಿಸಿದೆ ಹಾಗೂ ಅಸಂವಿಧಾನಿಕ ಹೆಜ್ಜೆ ಇರಿಸಿದೆ. ಏಕೆಂದರೆ ನನಗಿಂತಲೂ ಜೂನಿಯರ್ ಆಗಿರುವ ಸುನೀಲ್ ಕುಮಾರ್‌ಗೆ ಭಡ್ತಿ ನೀಡಿದೆ. ಸತ್ ಪ್ರಯತ್ನದಿಂದ ಏನಾದ್ರೂ ಪಡೆಯಲಿ ನನ್ನ ಅಭ್ಯಂತರವಿಲ್ಲ. ಆದರೆ ದುಷ್ಟ ಪ್ರಯತ್ನದಿಂದ ಭಡ್ತಿ ಪಡೆದಿದ್ದಾರೆ. ನನ್ನ ಹೋರಾಟ ನನ್ನೊಬ್ಬನದ್ದಲ್ಲ. ಎಲ್ಲಾ ಪೊಲೀಸ್ ಅಧಿಕಾರಿಗಳ ವಿರುದ್ಧದ ಹೋರಾಟವಾಗಿದೆ ಎಂಬುದಾಗಿ ಎಡಿಜಿಪಿ ರವೀಂದ್ರನಾಥ್ ಹೇಳಿಕೆ ನೀಡಿದ್ದಾರೆ.

Exit mobile version