ಗುರುವಾರ ಕಂದಾಯ ಸಚಿವ ಆರ್ ಅಶೋಕ್ ಸಭೆಯನ್ನು ನಡೆಸಿದ್ದಾರೆ . ವಿಧಾನ ಸೌಧದಲ್ಲಿ ಸಭೆ ನಡೆಸಿದ ಸಚಿವರು ಕೊರೋನಾ ನಿಯಂತ್ರಣದ ವಿಚಾರವನ್ನು ಚರ್ಚೆ ಮಾಡಿದ್ದಾರೆ . ಇದರ ಜೊತೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊರೋನಾ ವಿಚಾರದಲ್ಲಿ ಬಿಜೆಪಿ ಲೂಟಿ ಮಾಡ್ತಿದೆ ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ತಿರುಗೇಟು ನೀಡಿದ್ದಾರೆ .
ಅವರ ಬಳಿ ಯಾವುದಾದರು ದಾಖಲೆ ಇದ್ರೆ ಕೊಡಲಿ ಸುಮ್ಮನೆ ಹೇಳೋದಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ .ಬಳಿಕ ಮಾತನಾಡಿದ ಕಂದಾಯ ಸಚಿವರು ನಿರಾಣಿ ಪೆನ್ ಡ್ರೈವ್ ವಿಚಾರವೆತ್ತಿದ್ದು ; ನನ್ನ ಪೆನ್ನಿನಲ್ಲಿ ಇಂಕ್ ಖಾಲಿಯಾಗಿದೆ ಎಂದು ವ್ಯಂಗ್ಯವಾಡಿದ್ದಾರೆ .ಜೊತೆಗೆ ಪಿಎಸಿ ಸಭೆಯ ನಡಾವಳಿಯಲ್ಲಿ ಪ್ರಸ್ತಾಪ ವಿಚಾರಕ್ಕೆ ಸಂಬಂಧಪಟ್ಟಂತೆ ಸಿದ್ದರಾಮಯ್ಯರವರು ಇದನ್ನು ಟ್ವೀಟ್ ನಲ್ಲಿ ಹಾಕಿಕೊಂಡಿದ್ದಾರೆ . ಆದ್ರೆ ಯಾವುದೇ ಇಲ್ಲಿ ಹಗರಣ ನಡೆದಿಲ್ಲ ನಿರಾಣಿಯವರು ನನ್ನ ಬಳಿ ಪೆನ್ ಡ್ರೈವ್ ಇಲ್ಲ ಅಂತ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.