ವಿಧಾನಸೌಧದಲ್ಲಿ ಸಭೆ ನಡೆಸಿದ ಸಚಿವ ಆರ್. ಅಶೋಕ್

ಗುರುವಾರ ಕಂದಾಯ ಸಚಿವ ಆರ್ ಅಶೋಕ್  ಸಭೆಯನ್ನು ನಡೆಸಿದ್ದಾರೆ . ವಿಧಾನ ಸೌಧದಲ್ಲಿ ಸಭೆ ನಡೆಸಿದ ಸಚಿವರು  ಕೊರೋನಾ ನಿಯಂತ್ರಣದ ವಿಚಾರವನ್ನು ಚರ್ಚೆ ಮಾಡಿದ್ದಾರೆ . ಇದರ ಜೊತೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊರೋನಾ ವಿಚಾರದಲ್ಲಿ ಬಿಜೆಪಿ ಲೂಟಿ ಮಾಡ್ತಿದೆ ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ತಿರುಗೇಟು ನೀಡಿದ್ದಾರೆ .

ಅವರ ಬಳಿ ಯಾವುದಾದರು ದಾಖಲೆ ಇದ್ರೆ ಕೊಡಲಿ  ಸುಮ್ಮನೆ ಹೇಳೋದಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ .ಬಳಿಕ ಮಾತನಾಡಿದ ಕಂದಾಯ ಸಚಿವರು ನಿರಾಣಿ ಪೆನ್ ಡ್ರೈವ್ ವಿಚಾರವೆತ್ತಿದ್ದು ; ನನ್ನ ಪೆನ್ನಿನಲ್ಲಿ  ಇಂಕ್ ಖಾಲಿಯಾಗಿದೆ  ಎಂದು ವ್ಯಂಗ್ಯವಾಡಿದ್ದಾರೆ .ಜೊತೆಗೆ ಪಿಎಸಿ ಸಭೆಯ ನಡಾವಳಿಯಲ್ಲಿ ಪ್ರಸ್ತಾಪ ವಿಚಾರಕ್ಕೆ ಸಂಬಂಧಪಟ್ಟಂತೆ  ಸಿದ್ದರಾಮಯ್ಯರವರು  ಇದನ್ನು ಟ್ವೀಟ್ ನಲ್ಲಿ ಹಾಕಿಕೊಂಡಿದ್ದಾರೆ . ಆದ್ರೆ ಯಾವುದೇ ಇಲ್ಲಿ ಹಗರಣ ನಡೆದಿಲ್ಲ  ನಿರಾಣಿಯವರು  ನನ್ನ ಬಳಿ  ಪೆನ್ ಡ್ರೈವ್ ಇಲ್ಲ ಅಂತ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

Exit mobile version