ಇಂದು ಆರನೇ ಅಂತರಾಷ್ಟ್ರೀಯ ಯೋಗದಿನಾಚರಣೆ . ಇದರ ಅಂಗವಾಗಿ ರಾಷ್ಟ್ರಪತಿ ಭವನದಲ್ಲಿ ಯೋಗ ಪ್ರದರ್ಶನವನ್ನು ರಾಷ್ಟ್ರಪತಿ ರಾಮನಾಥ್ ಮಾಡಿದ್ದಾರೆ.. ನಂತರ ಇದೇ ಸಂದರ್ಭದಲ್ಲಿ ಕೋವಿಂದ್ ದೇಶದ ಜನತೆಗೆ 6 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಶುಭಾಶಯ ತಿಳಿಸಿದ್ದಾರೆ.
ಯೋಗ ಅನ್ನುವಂಥದ್ದು ಪುರಾತನ ಕಾಲದಿಂದಲು ದೇಶದಲ್ಲಿ ಮಾಡಿಕೊಂಡು ಬಂದಿರುವ ಆಸನ . ಯೋಗ ಇಡೀ ಮನುಕುಲಕ್ಕೆ ಭಾರತ ನೀಡಿದ ಅದ್ಭುತ ಕೊಡುಗೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಹೇಳಿದ್ದಾರೆ.
ಯೋಗವನ್ನು ಮಾಡೋದರಿಂದ ದೈಹಿಕ ಹಾಗೂ ಮಾನಸಿಕ ಬಲ ಹೆಚ್ಚುತ್ತದೆ .ಅದಕ್ಕಾಗಿ ಖುಷಿ ಮುನಿಗಳು ಯೋಗಾಭ್ಯಾಸವನ್ನು ಮಾಡುತ್ತಿದ್ರು. ಮಾತ್ರವಲ್ಲ ಇಂದಿಗೂ ಅದೇ ಪದ್ದತಿ ಭಾರತದಲ್ಲಿ ನಡೆದುಕೊಂಡು ಬಂದಿದೆ. ಇನ್ನೊಂದೆಡೆ ಕೊರೋನಾ ದಿನದಿಂದ ದಿನಕ್ಕೆ ದೇಶದಲ್ಲಿ ಹೆಚ್ಚುತ್ತಿದೆ. ಯೋಗಾಮಾಡೋದರಿಂದ ಕೊಂಚ ಮಟ್ಟಿಗೆ ದೇಹವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.