ಚಾಮರಾಜನಗರ : ಚಾಮರಾಜನಗರ ತಾಲ್ಲೂಕಿನ ಕೋಳಿಪಾಳ್ಯದ ಸರ್ಕಾರಿ ಶಾಲೆಯ ಏಳನೇ ತರಗತಿ ವಿದ್ಯಾರ್ಥಿಯೊಬ್ಬ ಸೋಮವಾರ ಶಾಲಾ ಕಾಂಪೌಂಡ್ನಿಂದ ಬಿದ್ದು. ಕುತ್ತಿಗೆ ಬಳಿ ತೀವ್ರ ಗಾಯವಾಗಿ ಮೃತಪಟ್ಟಿದ್ದಾನೆ. ಕೋಳಿಪಾಳ್ಯದ ಸೀನ ನಾಯಕ ಎಂಬುವವರ ಮಗ, ಲಕ್ಷೀಕಾಂತ್ (13) ಮೃತಪಟ್ಟ ವಿದ್ಯಾರ್ಥಿ. ಮಧ್ಯಾನ ಊಟದ ಬಿಡುವಿನ ವೇಳೆಯಳಲ್ಲಿ ಆಟವಾಡುವಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿದ್ಯಾರ್ಥಿ ಕಾಂಪೌಂಡ್ ಹತ್ತಿ ನಡೆದಾಡುತ್ತಿದ್ದಾಗ ಆಯತಪ್ಪಿ ಬಿದ್ದಿದ್ದಾನೆ. ಕೆಳಗಡೆ ಇದ್ದ ಚೂಪದ ಮರದ ತುಂಡು ಇಲ್ಲವೇ ಬೇರೆ ಇನ್ಯಾವುದೋ ವಸ್ತು ಕುತ್ತಿಗೆ ಬಳಿ ತಾಗಿದ್ದರಿಂದ ತೀವ್ರ ರಕ್ತಸ್ರಾವವಾಗಿದೆ. ತಕ್ಷಣ ವಿದ್ಯಾರ್ಥಿಯನ್ನು ಸ್ಥಳಿಯ ಕ್ಲಿನಿಕ್ ಗೆ ಕರೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಯಿತು. ಅಲ್ಲಿಂದ ಆಟೋದಲ್ಲಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬರುವಾಗ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾನೆ ಎಂದು ಸ್ಥಳೀಯರು ಮಾಯಿತಿ ನೀಡಿದ್ದಾರೆ.
ಆಟವಾಡುವಾಗ ಈ ರೀತಿ ಆಗಿದೆ ಎಂದು ಮಾಹಿತಿ ಸಿಕ್ಕಿದೆ. ಗಾಯ ಹೇಗಾಯಿತು ಎಂಬುದು ತನಿಖೆಯಿಂದ ತಿಳಿದು ಬರಬೇಕಿದೆ. ಬಾಲಕನ ತಂದೆ ದೂರು ನೀಡಿದ್ದಾರೆ. ಎಂದು ರಾಮಸಮುದ್ರ ಸಬ್ ಇನ್ಸ್ಪೆಕ್ಟರ್ ರವಿಕುಮಾರ್ ತಿಳಿಸಿದರು.