- ಮುಸ್ತಫಾ
ಬೆಂಗಳೂರು ಜ 11 : ಜಲ್ಲಿ ತುಂಬಿದ ಲಾರಿಯೊಂದು ಬೈಕ್ ಮತ್ತು ಎರಡು ಕಾರಿನ ಮೇಲೆ ಉರುಳಿಬಿದ್ದ ಪರಿಣಾಮ ಆರು ಮಂದಿ ಸಾವನ್ನಪ್ಪಿದ ದುರ್ಘಟನೆ ನಗರದ ಕುಂಬಳಗೋಡಿನಲ್ಲಿ ನಡೆದಿದೆ.
ಜ 10ರ ಸಂಜೆ 6:30 ರ ವೇಳೆಗೆ ಮೈಸೂರ್ ರೋಡಿನಿಂದ ಬೆಂಗಳೂರಿಗೆ ಬರುತ್ತಿದ್ದ ಜಲ್ಲಿ ತುಂಬಿದ ಲಾರಿವೊಂದು, ಕುಂಬಳಗೋಡು ಕಡಿಮಿಡಿಕೆ ಬಳಿ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮ ಆಯತಪ್ಪಿ ಪಕ್ಕದ ಸರ್ವಿಸ್ ರಸ್ತೆಯಲ್ಲಿ ಹೋಗುತ್ತಿದ್ದ ಕಾರು ಮತ್ತು ಬೈಕಿನ ಮೇಲೆ ಬಿದ್ದ ಪರಿಣಾಮ 6 ಮಂದಿ ಸ್ಥಳದಲ್ಲೇ ಮೃತ ಪಟ್ಟಿದ್ದು ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.
ಈ ಘಟನೆಯಲ್ಲಿ KA02 ಎಂಎಂ7749 ನಂಬರಿನ ಕಾರಿನಲ್ಲಿದ್ದ ನಿಕಿತಾ ರಾಣಿ, ವೀಣಮ್ಮ, ಇಂದ್ರಕುಮಾರ್, ಕೀರ್ತಿಕುಮಾರ್, ಟಿ ಜೆ ಶಿವಪ್ರಕಾಶ್ ಹಾಗೂ ಬೈಕ್ನಲ್ಲಿದ್ದ ಜಿತಿನ್ ಎಂಬುವವರು ಕೂಡ ಮೃತ ಪಟ್ಟಿದ್ದಾರೆ. ಘಟನೆಗೆ ಅಲ್ಲಿ ನಡೆಯುತ್ತಿದ್ದ ರಸ್ತೆ ಕಾಮಗಾರಿಯೇ ಕಾರಣ ಎಂದು ಹೇಳಲಾಗುತ್ತಿದೆ.
ಜೆಲ್ಲಿ ತುಂಬಿದ್ದ ಟಿಪ್ಪರ್ ಉರುಳಿದ ಪರಿಣಾಮ ಜಲ್ಲಿಕಲ್ಲಿನ ರಾಶಿಯ ಅಡಿಯಲ್ಲಿ ಕಾರುಗಳು ಹಾಗೂ ಬೈಕ್ ಸಿಲುಕಿದ್ದವು. ಜೆಸಿಬಿ ಮೂಲಕ ಜಲ್ಲಿ ಕಲ್ಲು ತೆರವು ಮಾಡಲಾಗಿದೆ ಎಂದು ಮಾಹತಿ ದೊರೆತಿದೆ. ಎರಡು ಕಾರುಗಳಲ್ಲಿ ತಲಾ 5 ರಂತೆ 10 ಜನ ತೆರಳುತ್ತಿದ್ದರು. ಅಪಘಾತದಲ್ಲಿ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೈಕ್ ಸವಾರ ಸೇರಿದಂತೆ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಈ ಬಗ್ಗೆ ಕುಂಬಳಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ