ಪವರ್ ಸ್ಟಾರ್ `ಅಪ್ಪು’ ಸಮಾಧಿಗೆ ಭೇಟಿ ನೀಡಿ, ಪುಷ್ಪಾರ್ಚನೆ ಸಲ್ಲಿಸಿದ ಅಲ್ಲು ಅರ್ಜುನ್!

appu

ಟಾಲಿವುಡ್(Tollywood) ಅಂಗಳದಲ್ಲಿ ತಮ್ಮ ಅಮೋಘ ಅಭಿನಯದ ಮೂಲಕ ಸ್ಟೈಲಿಷ್ ಸ್ಟಾರ್(Stylish Star) ಪಟ್ಟ ಪಡೆದುಕೊಂಡಿರುವ ನಟ ಅಲ್ಲು ಅರ್ಜುನ್(Allu arjun) ಇಂದು ಕನ್ನಡಿಗರ ಅಚ್ಚುಮೆಚ್ಚಿನ ಆರಾಧ್ಯದೈವ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್(Puneeth Rajkumar) ಅವರ ಸಮಾಧಿಗೆ ಭೇಟಿ ನೀಡಿ ನಮಿಸಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಅವರ ಸಮಾಧಿಗೆ ಆಗಮಿಸಿದ ಅಲ್ಲು ಅರ್ಜುನ್( Allu arjun ), ಅಪ್ಪು(Appu) ಅವರ ಸಮಾಧಿಯ ಬಳಿ ಹೋಗುತ್ತಿದ್ದಂತೆ ಒಂದಿಷ್ಟು ಹೂಗುಳಿಂದ ಅವರಿಗೆ ನಮಸ್ಕರಿಸಿದ್ದಾರೆ. ಕೆಲಕಾಲ ಪುನೀತ್(Puneeth) ಅವರ ಸಮಾಧಿ(Grave) ಮುಂದೆಯೇ ನಿಂತಿದ್ದ ಅಲ್ಲು ಅರ್ಜುನ್(Allu arjun) ಅವರು ಪುನೀತ್ ಅವರನ್ನು ನೆನಪಿಸಿಕೊಂಡು ಕಂಬನಿ ಮಿಡಿದಿದ್ದಾರೆ.

ಪವರ್ ಸ್ಟಾರ್ ಎಂದೇ ಕನ್ನಡಿಗರ ಮನದಲ್ಲಿ ಮಗುವಿನಂತೆ ಕುಳಿತಿದ್ದ ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡಿರುವ ಕೋಟ್ಯಾಂತರ ಅಭಿಮಾನಿಗಳು, ಇಂದಿಗೂ ಶೋಕದ ಕಡಲಲ್ಲಿ ಮುಳುಗಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಅಪ್ಪು ಅವರ ನೆನಪು ಎಲ್ಲರಲ್ಲೂ ಸದಾ ಕಾಡುತ್ತಿರುವುದಂತು ಸತ್ಯ. ಅಪ್ಪು ಅವರ ಅಗಲಿಕೆ ಕಂಡು ಮೂರು ತಿಂಗಳು ಕಳೆದರೂ ಕೂಡ, ಅಘಾದ ಸಂಖ್ಯೆಯಲ್ಲಿ ಅಭಿಮಾನಿಗಳು ಇಂದಿಗೂ ಸಮಾಧಿಯ ಬಳಿ ಬಂದು ಪುಷ್ಪಾರ್ಚನೆ ಮಾಡುವ ಮೂಲಕ ಪ್ರೀತಿ, ಅಭಿಮಾನಗಳನ್ನು ಸಲ್ಲಿಸುತ್ತಿದ್ದಾರೆ. ಅಪ್ಪು ಅಂದರೆ ಅಭಿಮಾನಿಗಳಿಗೆ ಅದೇನೋ ಹುಚ್ಚು ಪ್ರೀತಿ, ಹುಚ್ಚು ಅಭಿಮಾನ.

ಪವರ್ ಸ್ಟಾರ್ ಎಂಬ ಹೆಸರು ಕೇಳಿದರೆ ಸಾಕು ಅಭಿಮಾನಿಗಳ ಕಿವಿ ನೆಟ್ಟಗಾಗುವುದರ ಜೊತೆಗೆ ಹೃದಯ ತುಂಬಿ ಬರುವುದಂತೂ ಅಕ್ಷರಶಃ ಸತ್ಯ. ಪುನೀತ್ ಅವರ ಕೋಟ್ಯಾಂತರ ಅಭಿಮಾನಿಗಳಂತೆ ಅಲ್ಲು ಅರ್ಜುನ್ ಅವರು ಕೂಡ ಅವರ ಸಮಾಧಿಗೆ ಬಂದು ನಮನ ಸಲ್ಲಿಸಿದರು. ಬೆಂಗಳೂರಿನ ಪುನೀತ್ ರಾಜ್‍ಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿ, ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರನ್ನು ಭೇಟಿ ಮಾಡಿ ಸಾಂತ್ವನ ಹೇಳಿ, ಧೈರ್ಯದ ಮಾತುಗಳನ್ನು ತಿಳಿಸಿದ್ದಾರೆ. ಬಳಿಕ ಮಾಧ್ಯಮಗಳಿಗೆ ಸ್ಪಂದಿಸಿದ ಅಲ್ಲು ಅರ್ಜುನ್, ಅಪ್ಪು ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು. ಅಪ್ಪು ಅವರು ಇಂದು ಇಲ್ಲ ಎಂಬುದನ್ನು ನಿಜಕ್ಕೂ ನನ್ನಿಂದ ನಂಬಲು ಸಾಧ್ಯವಾಗುತ್ತಿಲ್ಲ ಎಂದು ನೆನೆದು ಭಾವುಕರಾದರು.

Exit mobile version