ಮುಸ್ಲಿಮರು ಮುಗ್ದ ಜನರು, ಅಮಾಯಕರು : ಆನಂದ ಸಿಂಗ್!

anand singh

ಮುಸ್ಲಿಮರು(Muslims) ಅಮಾಯಕರು, ಹೀಗಾಗಿ ಅವರ ಅಮಾಯಕತನವನ್ನು ಬಳಸಿಕೊಂಡು ವಿಷ ಬಿತ್ತಿ ಪ್ರಚೋದನೆ(Controversy) ಮಾಡಲಾಗುತ್ತಿದೆ ಎಂದು ಸಚಿವ ಆನಂದ ಸಿಂಗ್(Anand Singh) ಅಲ್ಪಸಂಖ್ಯಾತರ ಪರ ಬ್ಯಾಟ್ ಬೀಸಿದ್ದಾರೆ.

ವಿಜಯನಗರದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಮುಸ್ಲಿಮರ ಅಮಾಯಕರು, ಮುಗ್ದ ಜನರು. ಅವರಲ್ಲಿ ಕೆಲವರು ಬುದ್ದಿವಂತ ನಾಯಕರಿದ್ದಾರೆ. ಆ ನಾಯಕರೇ ಇವರನ್ನೆಲ್ಲಾ ಕಟ್ರೋಲ್ ಮಾಡುತ್ತಾರೆ. ಕಂಟ್ರೋಲ್ ಮಾಡುತ್ತಲೇ ಪ್ರಚೋದನೆಗೆ ಒಳಪಡಿಸುತ್ತಾರೆ. ಆ ಮೂಲಕ ತಮ್ಮ ರಾಜಕೀಯ ಏಳಿಗೆಗೆ ಇವರನ್ನೇ ಬಳಸಿಕೊಳ್ಳುತ್ತಾರೆ.

ಈ ಹಿಂದೆ ಎನ್‍ಆರ್‍ಸಿ ಮತ್ತು ಸಿಎಎ ಹೋಗಿದ್ದ ಕೆಲ ಮುಸ್ಲಿಮರನ್ನು ಕರೆದು ‘ಯಾವ ಪ್ರತಿಭಟನೆಗೆ ಹೋಗಿದ್ರಿ’ ಎಂದು ಕೇಳಿದೆ, ಆಗ ಅವರೆಲ್ಲಾ ‘ಅದೇನೋ ಕರೆದಿದ್ದರು, ವಿಷಯ ಗೊತ್ತಿಲ್ಲಾ, ಪ್ರತಿಭಟನೆ ಅಂತ ಮಾತ್ರ ಗೊತ್ತು’ ಎಂದು ಉತ್ತರಿಸಿದ್ದರು. ಹೀಗೆ ಅನೇಕ ರಾಜಕೀಯ ನಾಯಕರು ಮುಸ್ಲಿಮರನ್ನು ಇಟ್ಟುಕೊಂಡು ರಾಜಕೀಯ ಮಾಡುತ್ತಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು. ವೋಟ್‍ಬ್ಯಾಂಕ್ ಭದ್ರಪಡಿಸಿಕೊಳ್ಳಲು ಕೆಲ ನಾಯಕರು ಇವರನ್ನು ಪ್ರಚೋದಿಸುತ್ತಾರೆ. ಆ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಸಾಮಾನ್ಯ ನಾಗರಿಕನಾಗಿ ನಾನು ಹೇಳುವುದೆನೆಂದರೆ, ನಿಜಕ್ಕೂ ಮುಸ್ಲಿಮರು ಅಮಾಯಕರು.

ಕೋಮು ಪ್ರಚೋದನೆ ಮೂಲಕ ಅವರ ತಲೆ ತಿಕ್ಕುವ ಕೆಲಸ ನಡೆಯುತ್ತಿದ್ದು, ಆ ಕೆಲಸವನ್ನು ಕಾಂಗ್ರೆಸ್ ಪಕ್ಷ ಅನೇಕ ದಶಕಗಳಿಂದ ಮಾಡುತ್ತಿದೆ ಎಂದರು. ಇನ್ನು ನಮಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಮಾನತೆಯ ಸಂವಿಧಾನ ಬರೆದುಕೊಟ್ಟಿದ್ದಾರೆ. ಸಂವಿಧಾನವನ್ನು ಹಿಂದೂ, ಕ್ರಿಶ್ಚಿಯನ್, ಮುಸ್ಲಿಂ, ಬೌದ್ದ ಯಾರೇ ಆಗಿರಲಿ ಎಲ್ಲರೂ ಪಾಲಿಸಬೇಕು. ಅಲ್ಪಸಂಖ್ಯಾತರಲ್ಲೂ ವಿದ್ಯಾವಂತರಿದ್ದಾರೆ. ಆದರೆ ಕೆಲವರು ಅಮಾಯಕರನ್ನು ಹಿಡಿದುಕೊಂಡು ಗಲಭೆ ಮಾಡುತ್ತಾರೆ. ಹುಬ್ಬಳ್ಳಿಯಲ್ಲಿಯೂ ಅದೇ ಆಗಿದೆ ಎಂದರು.

Exit mobile version