ಅಣ್ಣನ ಮೇಲಿನ ಸಿಟ್ಟಿಗೆ ವಿದ್ಯುತ್ ಕಂಬ ಏರಿದ ತಮ್ಮ

ಮೈಸೂರು, ನ. 29: ನಿವೇಶನ ಮಾರಲು ತನ್ನ ಅಣ್ಣ ಬಿಡುತ್ತಿಲ್ಲ ಎಂದು ಆರೋಪಿಸಿ ವ್ಯಕ್ತಿಯೊಬ್ಬ ವಿದ್ಯುತ್ ಕಂಬ ಏರಿದ ಘಟನೆ ನಡೆದಿದೆ.
ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಬೀರತಮ್ಮನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದ ನಿವಾಸಿ ವೆಂಕಟೇಶ ಎಂಬಾತ ಕಂಬ ಏರಿದ ವ್ಯಕ್ತಿ. ಪಿತ್ರಾರ್ಜಿತ ನಿವೇಶನ ಮಾರಾಟ ಮಾಡಿ ಹಣ ಕೊಡುವಂತೆ ವೆಂಕಟೇಶ್ ಒತ್ತಾಯಿಸಿದ್ದಾರೆ. ಆದರೆ ಇದಕ್ಕೆ ನಿವೇಶನ ಮಾರಾಟ ಮಾಡಲು ಆತನ ಅಣ್ಣ ಶಿವಣ್ಣ ಒಪ್ಪಿಲ್ಲ. ಈ ಹಿನ್ನೆಲೆಯಲ್ಲಿ ವಿದ್ಯುತ್ ಕಂಬ ಹತ್ತಿದ ವೆಂಕಟೇಶ, ನಿವೇಶನ ಮಾರಾಟ ಮಾಡುವಂತೆ ಪಟ್ಟು ಹಿಡಿದಿದ್ದಾನೆ.
ಈ ವಿಷಯ ತಿಳಿದು ಸ್ಥಳದಲ್ಲಿ ಜಮಾಯಿಸಿದ ಗ್ರಾಮಸ್ಥರು, ಕಂಬ ಏರಿದ್ದ ವೆಂಕಟೇಶನ ಮನವೊಲಿಸಿದ್ದಾರೆ. ನಿವೇಶನ ಮಾರಿಸಿ ಹಣ ಕೊಡಿಸುವ ಭರವಸೆ ನೀಡಿ, ಕಂಬದಿಂದ ಕೆಳಗೆ ಇಳಿಸಿದ್ದಾರೆ. ಅದೃಷ್ಟವಶಾತ್ ಈ ಸಂದರ್ಭದಲ್ಲಿ ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದ ಕಾರಣ ಯಾವುದೇ ಅನಾಹತ ಸಂಭವಿಸಿಲ್ಲ.

Exit mobile version