ಅವರಿಗೆ ಸತ್ಯ ಹೇಳುವ ಬುದ್ಧಿ ಬರಲಿ: ಸಿದ್ದು ವಿರುದ್ಧ ಸಚಿವ ಸುರೇಶ್ ಕುಮಾರ್ ‌ಕಿಡಿ

ಬೆಂಗಳೂರು, ಡಿ. 21: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ “ಸತ್ಯ ಹೇಳುವ ಬುದ್ದಿ ಬರಲಿ” ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಟೀಕಿಸಿದ್ದಾರೆ.

ಶಿಕ್ಷಣ ಸಚಿವರು, ಖಾಸಗಿ ಶಿಕ್ಷಣ ಸಂಸ್ಥೆಗಳ ಜೊತೆ ಶಾಮಿಲಾಗಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು,

ಮೊನ್ನೆ “ಕೊಡವರು ಬೀಫ್ ತಿನ್ನುತ್ತಾರೆ” ಎಂಬ ಅಪ್ಪಟ ಸುಳ್ಳನ್ನು ಹೇಳಿ ನಂತರ ವಿಷಾದ ವ್ಯಕ್ತ ಪಡಿಸಿದ್ದ ರಾಜ್ಯದ ಪ್ರತಿಪಕ್ಷದ ನಾಯಕರು

ಇಂದು, ನಾನು (ಶಿಕ್ಷಣ ಸಚಿವ) ” ಖಾಸಗಿ ಶಿಕ್ಷಣ ಸಂಸ್ಥೆಗಳ ಜೊತೆ ಶಾಮಿಲಾಗಿದ್ದೇನೆ” ಎಂಬ ಮತ್ತೊಂದು ಅಪ್ಪಟ ಅಸತ್ಯವನ್ನು ಹೇಳಿದ್ದಾರೆ.

ಅವರಿಗೆ ಸತ್ಯ ಹೇಳುವ ಬುದ್ಧಿ ಬರಲಿ, ಎಂದು ಟ್ವೀಟ್ ಮಾಡಿದ್ದಾರೆ.

Exit mobile version