Ayurvedic Drinks for Stomach Problem: ಇತ್ತೀಚಿನ ದಿನಗಳಲ್ಲಿ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು (Ayurvedic Drinks for Stomach Problem) ಸರ್ವೇ ಸಾಮಾನ್ಯವಾಗಿದ್ದು, ಕೇವಲ
ನೈಸರ್ಗಿಕ ಸಾಮಾಗ್ರಿಗಳಿಂದ ತಯಾರಿಸಿದ ಪಾನೀಯಗಳನ್ನು ಕುಡಿಯುವ ಮೂಲಕ ಜೀರ್ಣಕ್ರಿಯೆ, ವಾಯುಪ್ರಕೋಪ, ಹೊಟ್ಟೆಯುಬ್ಬರಿಕೆ ಮೊದಲಾದ ತೊಂದರೆಗಳಿಂದ ದೂರವಿರಿ. ಇವು ಅತಿ ಸುರಕ್ಷಿತವಾಗಿದ್ದು
ಯಾವುದೇ ಅಡ್ಡ ಪರಿಣಾಮಗಳನ್ನು ಬೀರುವುದಿಲ್ಲ ಹಾಗಾಗಿ ಈ ಪಾನೀಯಗಳನ್ನು ಮನೆಯಲ್ಲಿಯೇ, ಸುಲಭವಾಗಿ ದೊರೆಯುವ ಸಾಮಾಗ್ರಿಗಳಿಂದಲೇ ತಯಾರಿಸಬಹುದು.
ಶುಂಠಿ ಟೀ
ಹೊಟ್ಟೆ ಉಬ್ಬರಿಕೆ ತೊಂದರೆ ಇರುವ ವ್ಯಕ್ತಿಗಳು ಟೀ ಪ್ರಿಯರೂ ಆಗಿದ್ದರೆ ಈ ವಿಧಾನ ನಿಮಗಾಗಿಯೇ ಇದೆ. ನಿತ್ಯವೂ ಬೆಳಿಗ್ಗೆದ್ದ ಬಳಿಕ ಪ್ರಥಮ ಆಹಾರವಾಗಿ ಕೊಂಚ ಹಸಿ ಶುಂಠಿ (Ginger) ಯನ್ನು ತುರಿದು
ಕುದಿಸಿದ ನೀರನ್ನು ಕುಡಿಯಬೇಕು. ಶುಂಠಿ ಜೀರ್ಣಕ್ರಿಯೆಯನ್ನು ಸುಲಭಗೊಳಿಸುವ ಗುಣ ವನ್ನು ಹೊಂದಿದೆ ಹಾಗೂ ಜೀರ್ಣಾಂಗಗಳಲ್ಲಿ ಸಿಲುಕಿಕೊಂಡಿರುವ ವಾಯುಪ್ರಕೋಪವನ್ನೂ ಶಮನಗೊಳಿಸಬಲ್ಲುದು.
ಜೀರಿಗೆ ಕುದಿಸಿದ ನೀರು:
ಜೀರ್ಣಕ್ರಿಯೆಗೆ ಸಂಬಂಧಿಸಿದ ಹಲವಾರು ತೊಂದರೆಗಳಿಗೆ ಆಯುರ್ವೇದ ಜೀರಿಗೆ ನೀರಿನ (Jeera Water)ಔಷಧಿಯನ್ನೇ ನೀಡುತ್ತದೆ. ಜೀರಿಗೆ ನಮ್ಮ ಅಡುಗೆ ಮನೆಯಲ್ಲಿ ಸದಾ ಲಭ್ಯವಿರುವ ಸಾಂಬಾರ್
ಪದಾರ್ಥವಾಗಿದೆ. ಜೀರಿಗೆ ಅಡುಗೆಯ ರುಚಿಯನ್ನು ಹೆಚ್ಚಿಸುವ ಜೊತೆಗೇ ಹಲ ವಾರು ಆರೋಗ್ಯಕರ ಪ್ರಯೋಜನಗಳನ್ನೂ ನೀಡುತ್ತದೆ. ವಾಯುಪ್ರಕೋಪ ವನ್ನು ಅಡಗಿಸುವುದು ಇವುಗಳಲ್ಲೊಂದು. ಇದನ್ನು
ತಯಾರಿಸುವುದೂ ಅತಿ ಸುಲಭ. ಈ ನೀರನ್ನು ಕುಡಿದ ಕೆಲವೇ ನಿಮಿಷಗಳಲ್ಲಿ ಹೊಟ್ಟೆಯುಬ್ಬರಿಕೆ (Ayurvedic Drinks for Stomach Problem) ಹಾಗೂ ವಾಯು ಪ್ರಕೋಪಗಳು ಇಲ್ಲವಾಗುತ್ತವೆ.
ಧನಿಯ ಕಾಳುಗಳ ನೀರು
ಆಯುರ್ವೇದ ಧನಿಯ ಕಾಳುಗಳನ್ನು (Coriander) ಇದರ ವಾತಹರ ಗುಣಗಳಿಗಾಗಿ ಆಯ್ದುಕೊಂಡಿದೆ. ಈ ನೀರನ್ನು ತಯಾರಿಸಲು ಕೊಂಚ ನೀರನ್ನು ಕುದಿಸಿ ಇದಕ್ಕೆ ಕುಟ್ಟಿ ಪುಡಿ ಮಾಡಿದ ಧನಿಯ ಅಥವಾ
ಕೊತ್ತಂಬರಿ ಕಾಳುಗಳನ್ನು ಹಾಕಿ ನೀರು ಅರ್ಧದಷ್ಟಾದ ಬಳಿಕ ಉರಿ ಆರಿಸಿ, ಸೋಸಿ, ತಣಿಸಿ ಕುಡಿಯುವ ಮೂಲಕ ವಾಯುಪ್ರಕೋಪ ಬಿಡುಗಡೆಗೊಳ್ಳುತ್ತದೆ.
ಪುದೀನಾ
ಪುದೀನಾ (Mint) ನೈಸರ್ಗಿಕ ತಂಪುಕಾರಕ ಹಾಗೂ ಜೀರ್ಣಶಕ್ತಿಯನ್ನು ಉತ್ತಮಗೊಳಿಸುವ ಗುಣಗಳನ್ನು ಹೊಂದಿದೆ. ಹೊಟ್ಟೆಯುಬ್ಬರಿಕೆ ಉಂಟಾದರೆ ಪುದೀನಾ ಟೀ ಕುಡಿಯುವ ಮೂಲಕ ಶೀಘ್ರ ಶಮನವನ್ನು
ಪಡೆಯುವ ಜೊತೆಗೇ ಇದರ ಚೇತೋಹಾರಿ ಸ್ವಾದ ಚೈತನ್ಯವನ್ನು ನೀಡುತ್ತದೆ. ಇದಕ್ಕಾಗಿ ಕೊಂಚ ಪುದಿನಾ ಎಲೆಗಳನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ಸೋಸಿ ಕುಡಿಯಬೇಕು.
ಇಂಗಿನ ನೀರು
ವಾಯುಪ್ರಕೋಪ ಮತ್ತು ಹೊಟ್ಟೆಯುಬ್ಬರಿಕೆಗೆ ಇಂಗು ಬೆರೆಸಿದ ನೀರನ್ನೂ ಕುಡಿಯಬಹುದು. ಇದಕ್ಕಾಗಿ ಒಂದು ಲೋಟ ಉಗುರು ಬೆಚ್ಚನೆಯ ನೀರಿಗೆ ಚಿಟಿಕೆಯಷ್ಟೇ ಇಂಗನ್ನು ಬೆರೆಸಿ ಕುಡಿದರೆ ಜೀರ್ಣಾಂಗಗಳಲ್ಲಿ
ಸಿಲುಕಿಕೊಂಡಿದ್ದ ವಾಯುಪ್ರಕೋಪವನ್ನು ತಕ್ಷಣವೇ ಶಮನಗೊಳಿಸುತ್ತದೆ. ಈ ವಿಧಾನಗಳು ಸುರಕ್ಷಿತ ಹಾಗೂ ಸುಲಭವಾಗಿ ಮನೆಯಲ್ಲಿಯೇ ತಯಾರಿಸಬಹುದಾಗಿವೆ. ಇವೆಲ್ಲವೂ ನೈಸರ್ಗಿಕ ಸಾಮಾಗ್ರಿಗಳನ್ನು
ಬಳಸುವ ಕಾರಣ ಅಪಾಯಕಾರಿ ರಾಸಾಯನಿಕಗಳು ಇವೆಯೇ ಎಂಬ ಆತಂಕಕ್ಕೆ ಕಾರಣವಿಲ್ಲ.
ಇದನ್ನು ಓದಿ: ಭಾರತದ ಮಾರುಕಟ್ಟೆಗೆ ಬರಲಿದೆ ಭರ್ಜರಿ ಮೈಲೇಜ್ ನೀಡುವ ಬಜಾಜ್ ಸಿಎನ್ಜಿ ಬೈಕ್