‘ಆಂಡಾಳಮ್ಮ’ನ ಪಯಣ ಶುರು

ಅಜಯ ರಾವ್ – ನಿಧಿ ಸುಬ್ಬಯ್ಯ ಅಭಿನಯದ “ಕೃಷ್ಣನ ಮ್ಯಾರೇಜ್ ಸ್ಟೋರಿ”, ವಿನೋದ್ ಪ್ರಭಾಕರ್ ನಟನೆಯ ” ಫೈಟರ್ ” ಹಾಗೂ “ಅಸ್ತಿತ್ವ” ಚಿತ್ರಗಳನ್ನು ನಿರ್ದೇಶಿಸಿದ್ದ ನೂತನ್ ಉಮೇಶ್ ಈಗ “A Tale of ಆಂಡಾಳಮ್ಮ” ಚಿತ್ರ‌ ನಿರ್ದೇಶಿಸಲು ಮುಂದಾಗಿದ್ದಾರೆ. “ಶ್ರೀನಿವಾಸ ಕಲ್ಯಾಣ”, ” ಬೀರಬಲ್” ಹಾಗೂ “ಓಲ್ಡ್ ಮಾಂಕ್” ಚಿತ್ರಗಳ ನಾಯಕ ಎಂ.ಜಿ.ಶ್ರೀನಿವಾಸ್ ಈ ಚಿತ್ರದಲ್ಲೂ ನಾಯಕನಾಗಿ ನಟಿಸುತ್ತಿದ್ದಾರೆ.

ಮೋಹಕ್ ಸಿನಿಮಾಸ್ ನಿರ್ಮಾಣ ಮಾಡುತ್ತಿರುವ ಈ ಚಿತ್ರ ಹಾರಾರ್ ಕಾಮಿಡಿ ಕಥಾಹಂದರ ಹೊಂದಿದೆ. ಕಾಮಿಡಿ ಜೊತೆಗೆ ಫ್ಯಾಮಿಲಿ ಎಮೋಷನ್ ಸಹ ಈ ಚಿತ್ರದಲ್ಲಿದೆ.

ಪೋಸ್ಟರ್ ನಲ್ಲಿ ಶೀರ್ಷಿಕೆಯ ಹಿಂದೆ ಕಾಣುವ ಹಂಡೆ ಸಹ ಈ ಚಿತ್ರದಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
ಚಿತ್ರಕ್ಕೆ “ಆಂಡಾಳಮ್ಮ” ಅಂತ ಶೀರ್ಷಿಕೆಯಿಡಲು ಈ ಹಂಡೆಯು ಒಂದು ಕಾರಣವಂತೆ.

ಸೆಪ್ಟೆಂಬರ್ ನಲ್ಲಿ ಚಿತ್ರೀಕರಣ ಆರಂಭವಾಗಲಿದ್ದು, ಬೆಂಗಳೂರು ಹಾಗೂ ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಚಿತ್ರೀಕರಣ ನಡೆಯಲಿದೆ.

ಸಂಪೂರ್ಣ ಮನರಂಜನೆಯ ಈ ಚಿತ್ರದ ತಾರಾಬಳಗ ಹಾಗೂ ತಾಂತ್ರಿಕವರ್ಗದ ಆಯ್ಕೆ ಅಂತಿಮಹಂತದಲ್ಲಿದೆ.

Exit mobile version