ಬೆಂಗಳೂರು ಸೆ 17 : ಹಿರಿಯ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಸ್ವಯಂ ನಿವೃತ್ತಿಗೆ ತೀರ್ಮಾನ ಮಾಡಿದ್ದು, ಸ್ವಯಂ ನಿವೃತ್ತಿ ಅರ್ಜಿಯನ್ನು ಡಿಜಿ ಅಂಡ್ ಐಜಿಪಿ ಹಾಗು ಹೋಮ್ ಸೆಕ್ರೆಟರಿಗೆ ನೀಡಿರುವ ಭಾಸ್ಕರ್ ರಾವ್ ಪ್ರಸ್ತುತ ರೈಲ್ವೇಸ್ ನಲ್ಲಿ ಎಡಿಜಿಪಿಯಾಗಿ ಅಗಿ ಸೇವೆ ಸಲ್ಲಿಸುತಿದ್ದಾರೆ.
ವೈಯುಕ್ತಿಕ ಕಾರಣಗಳಿಂದ ಸ್ವಯಂ ನಿವೃತ್ತಿ ಪಡೆಯಲು ಇಚ್ಚಿಸುತ್ತಿದ್ದೇನೆ. ಡಿಜಿ ಅಂಡ್ ಐಜಿಪಿ ಹಾಗು ಹೋಮ್ ಸೆಕ್ರೆಟರಿಗೆ ಪತ್ರ ಬರೆದಿದ್ದಾರೆ. ಸದ್ಯ ಸರ್ಕಾರ ಹಾಗು ಡಿಜಿ ಐಜಿ ಗೆ ಪತ್ರ ಬರೆದಿರೊ ಭಾಸ್ಕರ್ ರಾವ್ ಇಂದು ಬೆಳಗ್ಗೆ ಪತ್ರದ ಮೂಲಕ ರಾಜೀನಾಮೆಗೆ ಮನವಿ ಮಾಡಿದ್ದಾರೆ. ರಾಜೀನಾಮೆ ಅಂಗೀಕಾರವಾಗುವವರೆಗೆ ಎಡಿಜಿಪಿ ಆಗಿಯೇ ಕಾರ್ಯ ನಿರ್ವಹಿಸುತ್ತಿರುತ್ತಾರೆ.
ಭಾಸ್ಕರ್ ರಾವ್ ಅವರು ಬೆಂಗಳೂರು ಮಾಜಿ ಪೊಲೀಸ್ ಕಮಿಷನರ್ ರೈಲ್ವೆ ಇಲಾಖೆಯ ಹಾಲಿ ಎಡಿಜಿಪಿ ಭಾಸ್ಕರ್ ರಾವ್ ಅವರೇ ಸ್ವಯಂ ರಾಜೀನಾಮೆ ನೀಡುವುದಕ್ಕೆ ನಿರ್ಧರಿಸಿದ್ದಾರೆನ್ನಲಾಗಿದೆ.
ಚುನಾವಣೆಗೆ ಸಜ್ಜು : ಮೊದಲಿಂದಲೂ ಚುನಾವಣಾ ರಾಜಕಾರಣದ ಬಗ್ಗೆ ಉತ್ಸುಕತೆ ಆಸಕ್ತಿ ಹೊಂದಿದ್ದರೆನ್ನಲಾಗುವ ಭಾಸ್ಕರ್ ರಾವ್ ಅವರನ್ನು ಈಗಾಗಲೇ ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷಗಳು ಸಂಪರ್ಕ ಮಾಡಿ,ಅವರ ಮನವೊಲಿಸುವಂಥ ಕೆಲಸ ಮಾಡಿವೆ ಎನ್ನಲಾಗ್ತಿದೆ.