`ತಿಥಿ’ ಖ್ಯಾತಿಯ ಪೂಜಾ ಮತ್ತು ಯುವನಟ ವರ್ಧನ್ ತೀರ್ಥಹಳ್ಳಿ ಪ್ರಧಾನ ಪಾತ್ರದಲ್ಲಿ ನಟಿಸಿರುವ ಚಿತ್ರ ‘ದಾರಿ ಯಾವುದಯ್ಯ ವೈಕುಂಠಕೆ’. ಸಿನಿಮಾ ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ನೀಡಿದೆ. ಈ ಚಿತ್ರವು ಶರಣಪ್ಪ ಎಂ ಕೊಟಗಿ ನಿರ್ಮಾಣದಲ್ಲಿ ಶ್ರೀ ಬಸವೇಶ್ವರ ಕ್ರಿಯೇಷನ್ಸ್ ಲಾಂಛನದಲ್ಲಿ ಮೂಡಿ ಬಂದಿದೆ. ಸಿನಿಮಾ ಶೀಘ್ರದಲ್ಲೇ ಬಿಡುಗಡೆ ಯಾಗಲಿದೆ.
ಸಿನಿಮಾ ಉತ್ತಮ ಕಥೆ ಹೊಂದಿದ್ದು, ಚೆನ್ನಾಗಿ ಮೂಡಿ ಬಂದಿದೆ, ಒಳ್ಳೆಯ ಕಥೆ ಎಂದು ಸೆನ್ಸಾರ್ ಎಂದು ಸೆನ್ಸಾರ್ ಮಂಡಳಿ ನಿರ್ದೇಶಕರನ್ನು ಹೊಗಳಿದ್ದಾರೆ. ಹಾಗಾಗಿ ಪ್ರೇಕ್ಷಕರಿಗೂ ಸಿನಿಮಾ ಇಷ್ಟ ಆಗಬಹುದು ಎಂದು ನಿರ್ದೇಶಕರಾದ ಸಿದ್ದು ಪೂರ್ಣಚಂದ್ರ ಅವರ ಅಭಿಪ್ರಾಯ. ಸಿನಿಮಾದ ಫಸ್ಟ್ ಲುಕ್ ಚಿರಂಜೀವಿ ಸರ್ಜಾ ಬಿಡುಗಡೆ ಮಾಡಿದ್ದು ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತ್ತು. ಸಿನಿಮಾದ ಸಂಗೀತ ನಿರ್ದೇಶಕ ಲೋಕಿ. ನಿತಿನ್ ಛಾಯಾಗ್ರಹಣ ಮತ್ತು ಸಂಕಲನ ಮುತ್ತುರಾಜ್. ಚಿತ್ರದ ತಾರಾಗಣದಲ್ಲಿ ಅನುಷಾ, ಸಂಗೀತ, ಗೌಡಿ, ಸ್ಪಂದನ ಪ್ರಸಾದ್, ಸುಚಿತ್, ಸಿದ್ಧಾರ್ಥ್, ಅರುಣ್ ಮೂರ್ತಿ, ಮೈಸೂರು ಬಸವರಾಜ್, ಬಲ ರಾಜವಾಡಿ, ಶೀಬಾ, ಪ್ರಶಾಂತ್ ರಾವ್ , ಅರುಣ್ ಮೂರ್ತಿ , ದಯಾನಂದ್, ಸುಚಿತ್ ಮುಂತಾದವರಿದ್ದಾರೆ.