ಕೋರ್ಟ್‌ ಮೆಟ್ಟಿಲೇರಿದ್ದ ಮುಂಬೈ ಮಿತ್ರಮಂಡಳಿಯ 6 ಸಚಿವರಿಗೆ ಬಿಗ್‌ ರಿಲೀಫ್

ಬೆಂಗಳೂರು, ಮಾ. 06: ತಮ್ಮ ವಿರುದ್ಧ ಮಾನಹಾನಿ ಸುದ್ದಿ ಪ್ರಕಟಿಸದಂತೆ ಕೋರ್ಟ್‌ ಮೊರೆ ಹೋಗಿದ್ದ ರಾಜ್ಯ ಸಂಪುಟದ ಆರು ಮಂದಿ ಸಚಿವರಿಗೆ ನ್ಯಾಯಾಲಯವು ಬಿಗ್‌ ರಿಲೀಫ್‌ ನೀಡಿದೆ.

ಈ ಕುರಿತು ವಿಚಾರಣೆ ನಡೆಸಿದ ಬೆಂಗಳೂರಿನ ಸಿಟಿ ಸಿವಿಲ್‌ ನ್ಯಾಯಾಲಯವು ಅರ್ಜಿ ಸಲ್ಲಿಸಿರುವ ನಾಯಕರ ಬಗ್ಗೆ ಮಾರ್ಚ್ 30ರವರೆಗೆ ಯಾವುದೇ ಮಾನಹಾನಿ ಸುದ್ದಿಯನ್ನು ಪ್ರಕಟಿಸುವಂತಿಲ್ಲ ಎಂದು ಹೇಳಿದೆ.

ಮಾಜಿ ಸಚಿವರೊಬ್ಬರ ರಾಸಲೀಲೆ ಸಿಡಿ ಬಿಡುಗಡೆಯ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಯಾಗಿತ್ತು. ಈ ಹಿನ್ನೆಲೆಯಲ್ಲಿ ಸಚಿವರುಗಳಾದ
ಡಾ. ಕೆ. ಸುಧಾಕರ್‌, ಎಸ್ಟಿ ಸೋಮಶೇಖರ್‌, ಬಿಸಿ ಪಾಟೀಲ್‌, ಶಿವರಾಮ್‌ ಹೆಬ್ಬಾರ್‌, ನಾರಾಯಣಗೌಡ, ಬೈರತಿ ಬಸವರಾಜ್‌ ಅವರು ಕೋರ್ಟ್‌ ಮೆಟ್ಟಿಲೇರಿದ್ದಾರೆ.

Exit mobile version