ಛತ್ತೀಸ್‌ಘಡ್ ಮತಗಟ್ಟೆ ಮೇಲೆ ಬಾಂಬ್ ದಾಳಿ, ಓರ್ವ ಯೋಧನಿಗೆ ಗಾಯ

Rayapur: ಇಂದು (ನ. 7) ಛತ್ತೀಸ್‌ಘಡ್ (Bomb attack on polling station) ವಿಧಾನಸಭಾ ಚುನಾವಣೆಯ ಮೊದಲ ಸುತ್ತಿನ ಮತದಾನ ಆರಂಭವಾಗಿದ್ದು, ಮೊದಲ ಸುತ್ತಿನಲ್ಲಿ 20 ವಿಧಾನಸಭಾ

ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ಅವುಗಳಲ್ಲಿ 12 ಕ್ಷೇತ್ರಗಳು ಮಾವೋವಾದಿಗಳ ಉಪಟಳವಿರುವ ವಲಯವಾದ ಬಸ್ತಾರ್ ಪ್ರಾಂತ್ಯದಲ್ಲಿವೆ. ಈ ಪ್ರಾಂತ್ಯದ ಸುಕ್ಮಾ ಜಿಲ್ಲೆಯ ಟೋಂಡಾಮಾರ್ಕಾ

(Tondamarca) ಎಂಬಲ್ಲಿ ಮಾವೋವಾದಿಗಳು ಸುಧಾರಿತ ಸ್ಫೋಟಕದ ಮೂಲಕ ಮತಗಟ್ಟೆಯ ಮೇಲೆ ದಾಳಿ ನಡೆಸಿದ್ದು, ಈ ಘಟನೆಯಲ್ಲಿ ಓರ್ವ ಯೋಧ ಗಾಯಗೊಂಡಿದ್ದಾನೆ.

ಜೊತೆಗೆ, ಸಿಆರ್ ಪಿಎಫ್ (CRPF) ಹಾಗೂ ಇನ್ನಿತರ ಕೇಂದ್ರೀಯ ಸಶಸ್ತ್ರ ಮೀಸಲು ಪಡೆಗಳ ಯೋಧರನ್ನು ಭದ್ರತೆಗಾಗಿ ನಿಯೋಜಿಸಲಾಗಿದ್ದು, ಮಾವೋವಾದಿಗಳ ಉಪಟಳದ ಪ್ರಾಂತ್ಯಗಳಾಗಿದ್ದರಿಂದಲೇ

ಬಸ್ತಾರ್ ಪ್ರಾಂತ್ಯದ ಎಲ್ಲಾ ಮತಗಟ್ಟೆಗಳಿಗೆ ಪೊಲೀಸ್ (Police) ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. 60 (Bomb attack on polling station) ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ.

2018ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್, ಈ ಪ್ರಾಂತ್ಯದ 20 ಕ್ಷೇತ್ರಗಳಲ್ಲಿ 17 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. ಇಂದು (ನ. 7) ನಡೆಯುತ್ತಿರುವ 90 ವಿಧಾನಸಭಾ ಕ್ಷೇತ್ರಗಳ ಮತದಾನದಲ್ಲಿ

ಪ್ರಮುಖವಾದ ಅಭ್ಯರ್ಥಿಗಳೆಂದರೆ, ಬಿಜೆಪಿಯ (BJP) ಮಾಜಿ ಸಿಎಂ ರಮಣ ಸಿಂಗ್ (ರಂಜನ್ ಗಾಂವ್ ನಿಂದ ಸ್ಪರ್ಧೆ), ಚತ್ತೀಸ್ ಗಢದ ಕಾಂಗ್ರೆಸ್ (Congress) ಮುಖ್ಯಸ್ಥ ದೀಪಕ್ ಬೈಲ್ (ಚಿತ್ರಕೂಟ),

ಸಚಿವರಾದ ಕಾವಾಸಿ ಲಕ್ಮಾ (ಕೊಂಟಾ), ಮೋಹನ್ ಮರ್ಕಮ್ (ಕೊಂಡಾಗಾಂವ್), ಮೊಹಮ್ಮದ್ ಅಕ್ಬರ್ (ಕವಾರ್ದಾ), ಛವಿಂದ್ರಾ ಕರ್ಮಾ (ದಾಂತೇವಾಡ) ಪ್ರಮುಖರು.

ಈ ಪಟ್ಟಿಯಲ್ಲಿ ಇನ್ನೂ ಇತರರೆಂದರೆ, ಬಿಜೆಪಿಯ ಮಾಜಿ ಸಚಿವರಾದ ಲತಾ ಉಸೇಂಡಿ (ಕೊಂಡಾಗಾಂವ್), ವಿಕ್ರಮ್ ಉಸೇಂಡಿ (ಅಂತಾಗಢ), ಕೇದಾರ್ ಕಶ್ಯಪ್ (ನಾರಾಯಣಪುರ), ಮಹೇಶ್ ಗಂಗಾ

(ಬಿಜಾಪುರ), ಮಾಜಿ ಐಎಎಸ್ ಅಧಿಕಾರಿ ನೀಲಕಂಠ ಟೇಕಮ್ (ಕೇಶಕಾಲ್). 2003ರಿಂದ ಸತತವಾಗಿ ಬಿಜೆಪಿಯೇ ಈ ರಾಜ್ಯದಲ್ಲಿ ಅಧಿಕಾರದಲ್ಲಿತ್ತು. 2018ರಲ್ಲಿ ಕಾಂಗ್ರೆಸ್ (Congress) ಪಕ್ಷವು ರಾಜ್ಯದ 90

ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 71 ಕ್ಷೇತ್ರಗಳಲ್ಲಿ ಜಯ ಸಾಧಿಸುವ ಮೂಲಕ ಅಧಿಕಾರಕ್ಕೆ ಬಂದಿತ್ತು.

ಇದನ್ನು ಓದಿ: ಕರ್ನಾಟಕ ಸರ್ಕಾರದ ವಿರುದ್ಧ ಪ್ರಧಾನಿ ಮೋದಿಯ ಟೀಕಾಪ್ರಹಾರ: ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು

Exit mobile version