New Delhi: ಪ್ರಧಾನಿ ಮೋದಿ (Modi) ಅವರನ್ನು ಉಪರಾಷ್ಟ್ರಪತಿ ಜಗದೀಪ್ ಧನಕರ್ (Jagdeep Dhankar) ಅವರು (Congress slams Vice President) ಮಹಾತ್ಮಗಾಂಧಿ ಅವರಿಗೆ
ಹೋಲಿಸಿದ್ದಕ್ಕೆ ಪ್ರತಿಪಕ್ಷಗಳು ಪ್ರಶ್ನೆಗಳನ್ನು ಕೇಳಿದ್ದು, ಟೀಕೆ (Congress slams Vice President) ಮಾಡುವ ಮೂಲಕ ವಿರೋಧ ವ್ಯಕ್ತ ಪಡಿಸಿದೆ.
ಸೋಮವಾರ ಮಹಾರಾಷ್ಟ್ರದ ಮುಂಬೈನಲ್ಲಿರುವ (Mumbai) ಒಪೇರಾ ಹೌಸ್ಗೆ ಜಗದೀಪ್ ಅವರು ಶ್ರೀಮದ್ ರಾಜಚಂದ್ರ ಅವರ ಜನ್ಮ ವಾರ್ಷಿಕೋತ್ಸವದಲ್ಲಿ ಭಾಗವಹಿಸಲು ಆಗಮಿಸಿದ್ದರು.
ಈ ವೇಳೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು (Mahatma Gandhiji) ಸತ್ಯ ಮತ್ತು ಅಹಿಂಸೆಯ ಮೂಲಕ ಬ್ರಿಟಿಷರ ದಾಸ್ಯದಿಂದ
ನಮ್ಮನ್ನು ಮುಕ್ತಗೊಳಿಸಿದ್ದಾರೆ.
ಯಾವಾಗಲೂ ನೋಡ ಬಯಸುವ ಪ್ರಗತಿಯ ಪಥದಲ್ಲಿ ಪ್ರಧಾನಿ ಮೋದಿ ಮುನ್ನಡೆಸಿದರು. ಮಹಾತ್ಮ ಗಾಂಧಿ ಮತ್ತು ಪಿಎಂ ಮೋದಿ ಇಬ್ಬರೂ ಶ್ರೀಮದ್ ರಾಜಚಂದ್ರಜಿಯವರ (Shrimad Rajchandraji)
ಬೋಧನೆಗಳನ್ನು ಪ್ರತಿಬಿಂಬಿಸಿದ್ದಾರೆ ಎಂದು ಉಪರಾಷ್ಟ್ರಪತಿಗಳು ಹೇಳಿದರು. ಆದರೆ, ಉಪರಾಷ್ಟ್ರಪತಿಗಳ ಈ ಹೇಳಿಕೆಗೆ ಕಾಂಗ್ರೆಸ್ (Congress) ಸಂಸದ ಮಾಣಿಕ್ಕಂ ಠಾಗೋರ್ ತಿರುಗೇಟು ನೀಡಿದ್ದಾರೆ.
ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ “ನೀವು ಮಹಾತ್ಮರೊಂದಿಗೆ ಹೋಲಿಸಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಸರ್, ಮುಖಸ್ತುತಿಗೆ ಒಂದು ಮಿತಿ ಇದೆ ಎಂದು ನಮಗೆಲ್ಲರಿಗೂ ತಿಳಿದಿದೆ
ಮತ್ತು ನೀವು ಆ ಮಿತಿಯನ್ನು ದಾಟಿದ್ದೀರಿ” ಎಂದು ಟ್ಯಾಗೋರ್ (Tagore) ತಮ್ಮ ಟ್ವೀಟ್ನಲ್ಲಿ ಬರೆದಿದ್ದಾರೆ. ಬಹುಜನ ಸಮಾಜ ಪಕ್ಷದ ಸಂಸದ ಡ್ಯಾನಿಶ್ ಅಲಿ ಕೂಡ ಧಂಖರ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: ಡಿಕೆಶಿಯಂತೆ ಸಚಿವ ನಾಗೇಂದ್ರ ಮೇಲಿರೋ ಕೇಸ್ಗಳನ್ನು ವಾಪಸ್ ಪಡೆಯಿರಿ – ಸಿದ್ದರಾಮಯ್ಯಗೆ ರೆಡ್ಡಿ ಸವಾಲು
- ಭವ್ಯಶ್ರೀ ಆರ್ ಜೆ