ರಾಜ್ಯ ಕಾಂಗ್ರೆಸ್ (Congress) ಸರ್ಕಾರ ಸದ್ದಿಲ್ಲದೇ ಹಿಂದುಳಿದ ವರ್ಗಗಳ (Congress vs BJP) ಮೀಸಲಾತಿಯಲ್ಲಿ ಮುಸ್ಲಿಂಮರನ್ನು ಸೇರಿಸುವ ಹುನ್ನಾರ ನಡೆಸುತ್ತಿದೆ. ಈ ಮೂಲಕ ಅಲ್ಪಸಂಖ್ಯಾತರ
ರಕ್ಷಣೆಗೆ ಮುಂದಾಗಿದೆ ಎಂದು ರಾಜ್ಯ ಬಿಜೆಪಿ ಆರೋಪಿಸಿದೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ (BJP), ಹಿಂದುಳಿದವರ ಹಕ್ಕು ಮುಸ್ಲಿಮರ ಪಾಲು ಅಲ್ಪಸಂಖ್ಯಾತರ ಉದ್ಧಾರಕ ಕಾಂಗ್ರೆಸ್
ಸರ್ಕಾರದ ವಿರುದ್ಧ ಜನಾಕ್ರೋಶ ಮುಗಿಲು ಮುಟ್ಟಿದೆ. ಇನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನ ಕೇವಲ ಪುಸ್ತಕಕ್ಕೆ ಮಾತ್ರ ಸೀಮಿತಗೊಳಿಸಿತ್ತು ಕಾಂಗ್ರೆಸ್ ಪಕ್ಷ ದಲಿತರ ಉದ್ಧಾರಕ್ಕಾಗಿ
ಬಿಡಿಗಾಸು ಮೀಸಲು (Congress vs BJP)ಇಡುತ್ತಿರಲಿಲ್ಲ ಕಾಂಗ್ರೆಸ್.
ಇಂದು ದಲಿತರಿಗೆ ಮೀಸಲಿದ್ದ ಹಣವನ್ನು ಕಿತ್ತುಕೊಂಡು ಅಂಬೇಡ್ಕರ್ ಅವರ ಸಂವಿಧಾನಕ್ಕೆ ಅವಮಾನ ಮಾಡಿದೆ. ಸರ್ವನಾಶದ ಹಾದಿಯಲ್ಲಿರುವ ಕಾಂಗ್ರೆಸ್, ಹಿಂದೂಗಳನ್ನು ಹತ್ತಿಕ್ಕಿ ಅಲ್ಪಸಂಖ್ಯಾತರಿಗೆ
ಅಧಿಕಾರ, ಆಸ್ತಿ, ಮೀಸಲಾತಿ ಹಕ್ಕು ಕೊಡಲು ಹೊಂಚು ಹಾಕಿದೆ.ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ (Baba Saheb Ambedkar) ಅವರಿಗೆ ಕಾಂಗ್ರೆಸ್ ಪಕ್ಷ ಎಂದಿಗೂ ಗೌರವ ಕೊಡಲಿಲ್ಲ,
ಸನ್ಮಾನಿಸಲೂ ಇಲ್ಲ. ಚುನಾವಣೆಯಲ್ಲಿ ಅಂಬೇಡ್ಕರ್ ಅವರನ್ನು ಕಮ್ಯುನಿಸ್ಟರ ಜೊತೆಗೆ ಸೇರಿಕೊಂಡು ನೆಹರು ಸೋಲಿಸಿದರು. ಬಾಬಾ ಸಾಹೇಬ್ ಅವರು ಕೊಟ್ಟ ಸಂವಿಧಾನಕ್ಕೂ ಬೆಲೆ ಕೊಡುತ್ತಿಲ್ಲ.
ನಿಧನದ ನಂತರವೂ ಅಂಬೇಡ್ಕರ್ ಅವರಿಗೆ ಭಾರತ ರತ್ನ (Congress vs BJP) ಕೊಡಲಿಲ್ಲ ಎಂದು ಟೀಕಿಸಿದೆ.
ಇನ್ನೊಂದು ಟ್ವೀಟ್ನಲ್ಲಿ, ದಲಿತ ವಿರೋಧಿ ಅಂಬೇಡ್ಕರ್ ವಿರೋಧಿ ಕಾಂಗ್ರೆಸ್ ನಕಲಿ ಗಾಂಧಿ ಕುಟುಂಬದ ಗುಲಾಮಗಿರಿಯಲ್ಲಿದೆ.ಎಸ್ಸಿ/ಎಸ್ಟಿ (SC/ST) ಸಮುದಾಯಕ್ಕೆ ಮೀಸಲಿದ್ದ ₹25 ಸಾವಿರ ಕೋಟಿಯನ್ನೂ
ಸಿದ್ದರಾಮಯ್ಯ ಸರ್ಕಾರ ನುಂಗಿ ಹಾಕಿ ದಲಿತರಿಗೆ, ಹಿಂದುಳಿದವರಿಗೆ ಖಾಲಿ ಚಿಪ್ಪು ಕೊಟ್ಟಿದೆ. ಚುನಾವಣೆಗೂ ಮುನ್ನ ಕಿವಿ ಮೇಲೆ ಹೂವಿಟ್ಟ ಕಾಂಗ್ರೆಸ್ ಇದೀಗ ಖಾಲಿ ಚಿಪ್ಪು ಕೊಟ್ಟಿದೆ.ಹಿಂದೂಗಳ ಹಣ ಕಿತ್ತು
ಮುಸ್ಲಿಮರಿಗೆ ಹಿಂದೂಗಳ ಮೀಸಲಾತಿ ಮುಸ್ಲಿಮರಿಗೆ ಹಿಂದೂಗಳ ಆಸ್ತಿ ಮುಸ್ಲಿಂ ವಕ್ಫ್ ಬೋರ್ಡ್ಗೆ ನೀಡುತ್ತಿದೆ ಎಂದು ಆರೋಪಿಸಿದೆ.
ಇದನ್ನು ಓದಿ: ಪ್ರಜ್ವಲ್ ರೇವಣ್ಣ ಕೇಸ್: ನಾಲ್ಕೈದು ವರ್ಷಗಳ ಕಥೆ ತಂದು ಈಗ ದೂರು ಕೊಟ್ರೆ ಏನರ್ಥ- ಹೆಚ್.ಡಿ ರೇವಣ್ಣ