ಕಟ್ಟಪ್ಪ ಖ್ಯಾತಿಯ ಸತ್ಯರಾಜ್‌ಗೆ ಕೊರೊನಾ

sathyaraj

ಚೆನ್ನೈ ಜ 12 : ತಮಿಳಿನ ಖ್ಯಾತ ನಟ  ಸತ್ಯರಾಜ್(Sathyaraj ) ಅವರಿಗೆ ಕೊರೊನಾ ಪಾಸಿಟಿವ್‌ ಆಗಿದ್ದು ಸದ್ಯ ಅವರು ಚೆನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಾಹುಬಲಿ(Baahubali) ಚಿತ್ರದʻಕಟ್ಟಪ್ಪʼ ಎಂದೇ ಖ್ಯಾತಿ ಪಡೆದ ನಟ ಸತ್ಯರಾಜ್ ಅವರಿಗೆ ಕೋವಿಡ್ -19 ಪಾಸಿಟಿವ್‌ ಬಂದಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಸತ್ಯರಾಜ್ ಎಲ್ಲಿಯೂ ಘೋಷಿಸಿಕೊಂಡಿಲ್ಲ.ತೀವ್ರತರವಾದ ರೋಗಲಕ್ಷಣಗಳನ್ನು ಕಂಡುಬಂದ ಹಿನ್ನೆಲೆ ಸತ್ಯರಾಜ್ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ನ್ಯೂಸ್ 18 ನಲ್ಲಿ ವರದಿಯಾಗಿದೆ. ಈ ಮಾಹಿತಿಯು ಅಭಿಮಾನಿಗಳನ್ನು ಗೊಂದಲಕ್ಕೀಡುಮಾಡಿದ್ದು, ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಅವರ ಅಭಿಮಾನಿಗಳು ದೇವರಲ್ಲಿ ಪ್ರಾರ್ಥಿಸಿದ್ದಾರೆ.

ಇತ್ತೀಚಿನ ಕೆಲವು ದಿನಗಳಲ್ಲಿ ಹಲವಾರು ತೆಲುಗು ಚಿತ್ರರಂಗದ ಸೆಲೆಬ್ರಿಟಿಗಳು ಕೋವಿಡ್ ಸೋಂಕಿಗೊಳಗಾಗಿದ್ದಾರೆ. ಅವರುಗಳಲ್ಲಿ ಮಹೇಶ್ ಬಾಬು, ಮಂಚು ಮನೋಜ್, ಮಂಚು ಲಕ್ಷ್ಮಿ, ಸಂಗೀತ ನಿರ್ದೇಶಕ ತಮನ್, ನಿತಿನ್ ಅವರ ಪತ್ನಿ ಮತ್ತು ನಟ ವಿಶ್ವಕ್ ಸೇನ್ ಕೂಡ ಸೇರಿದ್ದಾರೆ. ಕಮಲ್ ಹಾಸನ್, ಚಿಯಾನ್ ವಿಕ್ರಮ್, ವಡಿವೇಲು ಮತ್ತು ತ್ರಿಶಾ ಕೃಷ್ಣನ್ ಸೇರಿದಂತೆ ತಮಿಳು ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಇತ್ತೀಚೆಗೆ ಕೊರೊನಾವೈರಸ್‌ಗೆ ತುತ್ತಾಗಿದ್ದಾರೆ.

ಕೊರೊನಾದಿಂದಾಗಿ ಕೆಲವು ಹೊಸ ಚಿತ್ರಗಳ ಬಿಡುಗಡೆ ಮುಂದೂಡಲ್ಪಟ್ಟಿದೆ. ರಾಜಮೌಳಿ ನಿರ್ದೇಶನದ ಹಾಗೂ ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ಅಭಿನಯದ ಬಹು ನಿರೀಕ್ಷಿತ ಬಹುಭಾಷಾ ಚಿತ್ರ ‘ಆರ್‌ಆರ್‌ಆರ್’ ಕೂಡ ಕೋವಿಡ್ -19 ಕಾರಣದಿಂದಾಗಿ ಮುಂದೂಡಲಾಗಿದೆ. ಈ ಚಿತ್ರವು ಜನವರಿ 7 ರಂದು ರಿಲೀಸ್‌ ಆಗಬೇಕಿತ್ತು. ಎಂದು ವರದಿಯಾಗಿದೆ.

Exit mobile version