ಸ್ಯಾಂಡಲ್​ವುಡ್​ನಲ್ಲಿ ಕೊರೊನಾ ಕರಿನೆರಳು: ಚಿತ್ರ ನಿರ್ಮಾಪಕ ಚಂದ್ರಶೇಖರ್ ಮಹಾಮಾರಿಗೆ ಬಲಿ

ಬೆಂಗಳೂರು, ಏ. 29: ಸ್ಯಾಂಡಲ್‌ವುಡ್‌ ಖ್ಯಾತಿಯ ನಿರ್ಮಾಪಕ ಚಂದ್ರಶೇಖರ್‌ ಕೋವಿಡ್‌ನಿಂದ ಮೃತಪಟ್ಟಿದ್ದಾರೆ.

23 ದಿನಗಳ ಹಿಂದೆ ಕೋವಿಡ್‌ ತಗುಲಿ ಮಣಿಪಾಲ್‌ ಆಸ್ಪತ್ರೆಗೆ ದಾಖಲಾಗಿದ್ದರು. ಶ್ವಾಸಕೋಶದ ಸಮಸ್ಯೆ ಉಲ್ಬಣಗೊಂಡು ಇಂದು (ಗುರುವಾರ) ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.
ರನ್ನ, ಅಣ್ಣಯ್ಯ, ಬಿಂದಾಸ್ ಮೊದಲಾದ ಹಿಟ್‌ ಚಿತ್ರಗಳ ನಿರ್ಮಾಪಕರಾಗಿದ್ದರು ಚಂದ್ರಶೇಖರ್.

ಅಲ್ಲದೇ, ಮಂಜು ಮಾಂಡವ್ಯ ನಿರ್ದೇಶನದಲ್ಲಿ ಉಪೇಂದ್ರ ಅಭಿನಯಿಸುತ್ತಿರುವ ಹೊಸ ಸಿನಿಮಾವನ್ನು ನಿಮಾ್ಪಕ ಚಂದ್ರಶೇಖರ್​ ಇತ್ತೀಚೆಗಷ್ಟೆ ಅನೌನ್ಸ್​ ಮಾಡಿದ್ದರು. ಆದರೆ ಈ ಸಿನಿಮಾ ಸೆಟ್ಟೇರುವ ಮುನ್ನವೇ ಚಂದ್ರಶೇಖರ್​ ಇಹಲೋಕ ತ್ಯಜಿಸಿದ್ದಾರೆ.

ಮೊನ್ನೆಯಷ್ಟೇ ನಿರ್ಮಾಪಕ ಕೋಟಿ ರಾಮು,ಪುಟ್ಟಣ್ಣ ಕಣಗಾಲ್​ ಅವರ ಮಗ ರಾಮು ಕಣಗಾಲ್​, ಮೇಕಪ್​ ಶ್ರೀನಿವಾಸ್​ ಅಲಿಯಾಸ್​ ಮೇಕಪ್​ ಸೀನಣ್ಣ ಸಹ ಕೋವಿಡ್​ಗೆ ಬಲಿಯಾಗಿದ್ದಾರೆ.

Exit mobile version