ಸಣ್ಣ ವಿಚಾರಗಳಿಗೂ ದಾಂಧಲೆ ಮಾಡಲು, ಅವರು ಮಾತ್ರ ಉಪ್ಪು, ಹುಳಿ, ಖಾರ ತಿಂತಾರಾ? : ಸಿ.ಟಿ ರವಿ ಪ್ರಶ್ನೆ!

ct ravi

ಡಿಜೆ ಹಳ್ಳಿ ಮತ್ತು ಕೆಜೆ ಹಳ್ಳಿಯಲ್ಲಿಯೂ ಕೂಡಾ ಈ ಹಿಂದೆ ನಡೆದ ಘಟನೆ ವಾಟ್ಸ್‍ಪ್ ಸ್ಟೇಟಸ್ ಕಾರಣದಿಂದ ನಡೆದಿತ್ತು. ಸಣ್ಣ ಸಣ್ಣ ವಿಚಾರಗಳಿಗೂ ದಾಂಧಲೆ ಮಾಡಲು ಇವರು ಮುಂದಾಗುತ್ತಾರೆ. ಈ ನೆಲೆದ ಕಾನೂನಿಗೆ ಬೆಲೆ ಕೊಡುವ ಮನಸ್ಥಿತಿ ಇದೆನಾ? ಸಣ್ಣ ವಿಚಾರಗಳನ್ನೇ ಇಟ್ಟುಕೊಂಡು ಸಮಾಜದಲ್ಲಿ ಅಶಾಂತಿ ಸೃಷ್ಟಿಸಿ ದಾಂಧಲೆ ಮಾಡಲು, ಇವರು ಮಾತ್ರ ಉಪ್ಪು, ಉಳಿ, ಖಾರ ತಿಂತಾರಾ? ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ(CT Ravi) ಪ್ರಶ್ನಿಸಿದರು.

ಹೊಸಪೇಟೆಯಲ್ಲಿ ಮಾತನಾಡಿದ ಅವರು, ಇವರು ಸಣ್ಣ ವಿಚಾರಗಳನ್ನೇ ಇಟ್ಟುಕೊಂಡು ಗಲಾಟೆ ಮಾಡಲು ಕಾಯುತ್ತಿರುತ್ತಾರೆ. ಈ ನೆಲದ ಕಾನೂನಿನ ಬಗ್ಗೆ ಗೌರವವಿಲ್ಲ. ಈ ಹಿಂದೆಯೂ ಇದೇ ರೀತಿಯ ಘಟನೆಗಳು ನಡೆದಿವೆ. ಇಂತಹ ಘಟನೆಗಳು ನಡೆದಾಗ ಸೆಕ್ಯುಲರ್ ಬುದ್ದಿಜೀವಿಗಳು ಮಾಯವಾಗುತ್ತಾರೆ. ಈ ರೀತಿಯ ಘಟನೆಗಳ ಬಗ್ಗೆ ಸೆಕ್ಯುಲರ್ ವಾದಿಗಳು ಏಕೆ ಮಾತನಾಡುವುದಿಲ್ಲ ಎಂದು ಖಾರವಾಗಿ ಪ್ರಶ್ನಿಸಿದರು. ಇನ್ನು ಇದೇ ಸಂಬರ್ಧದಲ್ಲಿ ಮಾತನಾಡಿದ ರಾಜ್ಯ ಬಿಜೆಪಿ ನಾಯಕ ಜಗದೀಶ್ ಶೆಟ್ಟರ್, ಕಲ್ಲಂಗಡಿ ಒಡೆದಾಗ ಅದನ್ನು ಖಂಡಿಸಿ ಕಾಂಗ್ರೆಸ್ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿತ್ತು.

ಆದರೆ ಇದೀಗ ಅನೇಕ ಮನೆಗಳು, ಗಾಡಿಗಳು, ತಲೆಗಳನ್ನು ಒಡೆದು ದಾಂಧಲೆ ಮಾಡಲಾಗಿದೆ. ಈ ಘಟನೆಯ ಕುರಿತು ಕಾಂಗ್ರೆಸ್ ಪ್ರತಿಭಟನೆ ಮಾಡುವುದಿಲ್ಲವೇ? ಎಂದು ವ್ಯಂಗ್ಯವಾಡಿದರು. ಇನ್ನು ಇದೇ ವೇಳೆ ಮಾತನಾಡಿದ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಹುಬ್ಬಳ್ಳಿಯಲ್ಲಿ ಸಣ್ಣ ವಿಚಾರಕ್ಕೆ ಶಾಂತಿಯನ್ನು ಕದಡುವ ಕೆಲಸ ನಡೆದಿರುವುದು ದುರದೃಷ್ಟಕರ. ಈ ಘಟನೆಯಲ್ಲಿ ಭಾಗಿಯಾದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು.

ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಿದೆ. ಕೋಮುವಾದವನ್ನು ನಿಯಂತ್ರಿಸುವ ಕೆಲಸವನ್ನು ಪೋಲಿಸರು ಮಾಡಬೇಕೆಂದು ಸಲಹೆ ನೀಡಿದರು.

Exit mobile version