ʻಸಿಡಿʼ ಪ್ರಕರಣಕ್ಕೆ ಟ್ವಿಸ್ಟ್‌: ಜಾರಕಿಹೊಳಿ ವಿರುದ್ಧದ ದೂರ ಹಿಂಪಡೆಯಲು ದಿನೇಶ್‌ ನಿರ್ಧಾರ

ಬೆಂಗಳೂರು, ಮಾ. 08: ರಮೇಶ್‌ ಜಾರಕಿಹೊಳಿ ʻಸಿಡಿʼ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಭೀರ ಆರೋಪ ಮಾಡಿದ್ದ ಸಾಮಾಜಿಕ ಕಾರ್ಯಕರ್ತ ದಿನೇಶ್‌ ಕಲ್ಲಹಳ್ಳಿ ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ದೂರನ್ನು ವಾಪಸ್‌ ಪಡೆಯಲು ಮುಂದಾಗಿದ್ದಾರೆ.

ʻಸಿಡಿʼ ಪ್ರಕರಣದಲ್ಲಿ 5 ಕೋಟಿ ರೂ. ಡೀಲ್‌ ಆಗಿದೆ ಎಂದು ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದರು. ಈ ಮಾತಿನಿಂದ ನನ್ನ ಮನಸ್ಸಿಗೆ ನೋವಾಗಿದೆ. ಜನ ನನ್ನನ್ನು ಸಂಶಯದಿಂದ ನೋಡುವಂತಾಗಿದೆ. ಹೀಗಾಗಿ, ದೂರು ವಾಪಸ್‌ ಪಡೆಯುತ್ತಿದ್ದೇನೆ. ದೂರು ವಾಪಸ್‌ ಪಡೆಯುವ ಸಂಬಂಧ ನಮ್ಮ ವಕೀಲರು ಠಾಣೆಗೆ ಹೋಗಿದ್ದಾರೆ. ಮುಂದಿನ ವಿಚಾರವನ್ನು ಆಮೇಲೆ ತಿಳಿಸುತ್ತೇನೆ ಎಂದು ಅವರು ಹೇಳಿದ್ದಾರೆ.

Exit mobile version