ಬೆಂಗಳೂರು,ಜೂ.22: ರಾಜ್ಯದಲ್ಲಿ ಕೊರೋನಾ ಸೋಂಕಿನ ಭೀತಿಯ ನಡುವೆಯೂ ಶಾಲಾ-ಕಾಲೇಜು ಆರಂಭಕ್ಕೆ ಸರ್ಕಾರಕ್ಕೆ ಡಾ.ದೇವಿಪ್ರಸಾದ್ ಶೆಟ್ಟಿ ಸಮಿತಿಯು ಮಧ್ಯಂತರ ವರದಿಯಲ್ಲಿ ತಿಳಿಸಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಶೀಘ್ರದಲ್ಲೇ ಹಂತ ಹಂತವಾಗಿ ಶಾಲೆ ತೆರೆಯಲೇಬೇಕು. ಆನ್ ಲೈನ್ ಶಿಕ್ಷಣದಿಂದ ಶೈಕ್ಷಣಿಕ ಅಸಮಾನತೆ ಹೆಚ್ಚಿದೆ ದೊಡ್ಡಮಕ್ಕಳಿಗೆ ಮೊದಲು ಶಾಲೆ ತೆರೆಯಬೇಕು. ಬಳಿಕ ಚಿಕ್ಕಮಕ್ಕಳಿಗೆ ಶಾಲೆ ಆರಂಭಿಸಬೇಕು. ಶಾಲೆ ಆರಂಭಿಸದಿದ್ದರೆ ಬಾಲ್ಯವಿವಾಹ ಅಪೌಷ್ಟಿಕತೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಸಮಿತಿ ತಿಳಿಸಿದೆ.
ಅಲ್ಲದೇ, ಜ್ವರದ ಲಕ್ಷಣವಿದ್ದರೆ ಮಕ್ಕಳನ್ನು ಶಾಲೆಗೆ ಸೇರಿಸಬಾರದು, ಶಾಲಾ ಕಿಟಕಿ ಬಾಗಿಲನ್ನು ತೆರೆದಿಟ್ಟಿರಬೇಕು ಶಾಲಾ ಆವರಣದಲ್ಲೆ ತರಗತಿತತ್ವ ನಡೆಸಲು ಅವಕಾಶ ನೀಡಬೇಕು, ಶಾಲೆಯಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ಅಥವಾ ಗುಂಪುಗೂಡುವಿಕೆಗೆ ಅವಕಾಶ ನೀಡಬಾರದು ಎಂದು ಸಮಿತಿ ತಿಳಿಸಿದ್ದು, ಪುಸ್ತಕ ಬಳಸಲು ಅವಕಾಶವಿಲ್ಲ ಹಾಗೂ ಶಾಲಾ ಆವರಣಕ್ಕೆ ಹೊರಗಿನವರು ಪ್ರವೇಶಿಸುವಂತಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಅಲ್ಲದೇ, ಪಾಳಿ ಅಥವಾ ದಿನ ಬಿಟ್ಟು ದಿನ ತರಗತಿ ನಡೆಸಲು ಅನುಮತಿ, ಮಕ್ಕಳನ್ನು ಪೋಷಕರೆ ಶಾಲೆಗೆ ಕರೆತಂದು ಕರೆದೊಯ್ಯಬೇಕು, ಎರಡು ಮಕ್ಕಳ ಮಧ್ಯೆ ಒಂದು ಮೀ ಅಂತರವಿರಬೇಕು ಎಂಬಿತ್ಯಾದಿ ಅಂಶಗಳುಳ್ಳ ಸರ್ಕಾರಕ್ಕೆ 92 ಪುಟಗಳ ವರದಿ ನೀಡಿದೆ.
ಇದರೊಂದಿಗೆ 1ರಿಂದ 10 ರವರೆಗಿನ ತರಗತಿ ಸದ್ಯಕ್ಕಿಲ್ಲ
ಡಿಗ್ರಿ ಕಾಲೇಜು ಆರಂಭಕ್ಕೆ ಚಿಂತನೆ ನಡೆಸಲಾಗಿದ್ದು, ಲಸಿಕೆ ಪಡೆದ ಬಳಿಕ ಕಾಲೇಜು ಆರಂಭಕ್ಕೆ ಚಿಂತನೆ ನಡೆಸಲಾಗಿದೆ. ಈ ಮೂಲಕ ಸದ್ಯಕ್ಕೆ 1 ರಿಂದ 10 ನೇ ತರಗತಿ ಶಾಲೆಗಳು ಆರಂಭವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.