Bengaluru: ಜಯನಗರ (Jayanagar) 4ನೇ ಬ್ಲಾಕ್ನಲ್ಲಿ ಇರುವ ಬೀದಿ ವ್ಯಾಪಾರಿಗಳಿಗೆ (Eviction of street vendors – BBMP) ವ್ಯಾಪಾರ ಮಾಡದಂತೆ ಬಿ.ಬಿ.ಎಂ.ಪಿ ಮಾರ್ಷಲ್
(Marshal) ಗಳು ಹಾಗೂ ಅಧಿಕಾರಿಗಳು ಸೂಚನೆ ನೀಡಿದ್ದು, ತೆರವು ಕಾರ್ಯಾಚರಣೆ ನಡೆಸಿದೆ. ಬೀದಿ ಬದಿ ವ್ಯಾಪಾರಿಗಳ ಸಂಘ ಇದಕ್ಕೆ ವಿರೋಧಿಸಿದೆ.
ಕಾಂಪ್ಲೆಕ್ಸ್ (Complex) ಸುತ್ತಮುತ್ತಲಿನ ಬೀದಿ ವ್ಯಾಪಾರಿಗಳು ಸುಮಾರು 30 – 40 ವರ್ಷಗಳಿಂದ ಅಲ್ಲಿ ವ್ಯಾಪಾರ ಮಾಡಿಕೊಂಡು ಬರುತ್ತಿದ್ದು, ಅಲ್ಲಿ ಸುಮಾರು 400-500 ಬೀದಿ ವ್ಯಾಪಾರಿಗಳಿದ್ದಾರೆ.
ಅವರಿಗೆ 2018ರಲ್ಲಿ ಬಿಬಿಎಂಪಿ ಗುರುತಿನ ಚೀಟಿ ಹಾಗೂ ವ್ಯಾಪಾರ ಪ್ರಮಾಣ ಪತ್ರವನ್ನು ನೀಡಿದ್ದು, ಆದರೆ ನ.4ರಂದು ಬಿಬಿಎಂಪಿ ಮಾರ್ಷಲ್ಗಳು ಹಾಗೂ ಅಧಿಕಾರಿಗಳು ಆಗಮಿಸಿ ಬೀದಿಯಲ್ಲಿ
ವ್ಯಾಪಾರ ಮಾಡಬಾರದು ಎಂದು (Eviction of street vendors – BBMP) ಸೂಚಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಬೀದಿ ಬದಿ ವ್ಯಾಪಾರಿಗಳ ಸಂಘವು, ನಾವು ಯಾವುದೇ ಅಪರಾಧ ಮಾಡಿಲ್ಲ. ಬೀದಿ ವ್ಯಾಪಾರಿಗಳ ಕಾನೂನಿನ ಪ್ರಕಾರ ವ್ಯಾಪಾರ ಮಾಡುತ್ತಿದ್ದೇವೆ ನಮ್ಮಿಂದ ತಪ್ಪಿದ್ದರೆ
ದಯವಿಟ್ಟು ಸಭೆಕರೆದು ತಿಳಿಸಿ, ನಾವು ತಿದ್ದಿಕೊಳ್ಳುತ್ತೇವೆ. ಆದರೆ ಈ ರೀತಿ ದಿಡೀರ್ ಎತ್ತಂಗಡಿ ಮಾಡಿದರೆ ಹೇಗೆ? ಎಂದು ಹೇಳಿದ್ದಾರೆ.
ಬೀದಿ ವ್ಯಾಪಾರಿಗಳ (ಜೀವನೋ ಪಾಯ ರಕ್ಷಣೆ ಹಾಗು ನಿಯಂತ್ರಣ )ಕಾಯ್ದೆ 2014ರ ಕಲಾಂ (Kalam) 3(3)ರ ಪ್ರಕಾರ ಕಾನೂನಿನಡಿಯಲ್ಲಿ ಸಮೀಕ್ಷೆ ಮುಗಿದು ವ್ಯಾಪಾರ ಮಾಡುತ್ತಿರುವ ಎಲ್ಲಾ
ವ್ಯಾಪಾರಿಗಳಿಗೆ ಗುರುತಿನ ಚೀಟಿ ಕೊಡುವ ತನಕ ಯಾರಿಗೂ ಎತ್ತಂಗಡಿ ಮಾಡುವಂತಿಲ್ಲ. ಹಾಗೆಯೇ ಕಲಾಂ 18ರ ಪ್ರಕಾರ ಲಿಖಿತ ನೋಟಿಸ್ ನೀಡದೆ ಯಾರನ್ನು ಎತ್ತಂಗಡಿ ಮಾಡುವಂತಿಲ್ಲ ಎಂದು
ಬೀದಿ ಬದಿ ವ್ಯಾಪಾರಿಗಳ ಸಂಘ ತಿಳಿಸಿದೆ.
ಇದನ್ನು ಓದಿ: ಮನೆಯ ಪೀಠೋಪಕರಣ ಖರೀದಿಗೆ 3 ಕೋಟಿ ; ಸಿದ್ದು ಸಮಾಜವಾದಿಯಲ್ಲ ; ಮಜಾವಾದಿ ಎಂದ ಬಿಜೆಪಿ!
- ಭವ್ಯಶ್ರೀ ಆರ್ ಜೆ