ಶಿರಾಡಿಘಾಟಿಯಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ: ಗ್ಯಾಸ್ ಸೋರಿಕೆಯಿಂದ ವಾಹನಗಳ ಸಂಚಾರ ಬಂದ್, ಬದಲಿ ಮಾರ್ಗ ಬಳಸಲು ಸೂಚನೆ

Sakaleshapura: ಗ್ಯಾಸ್ ಟ್ಯಾಂಕರ್ (Gas Tanker)ವೊಂದು ಶಿರಾಡಿಘಾಟ್ ರಸ್ತೆ ಎನ್.ಹೆಚ್- 75ರಲ್ಲಿ ಪಲ್ಟಿಯಾಗಿ ಟ್ಯಾಂಕರ್‌ನಿಂದ ಗ್ಯಾಸ್ ಸೋರಿಕೆಯಾಗುತ್ತಿರುವ ಘಟನೆ ಬುಧವಾರ ಬೆಳಿಗ್ಗೆ ಸಂಭವಿಸಿದೆ.

ಹೆದ್ದಾರಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ಸಿಗದೆ ಗ್ಯಾಸ್ ಟ್ಯಾಂಕರ್ ವೊಂದು ಪಲ್ಟಿಯಾಗಿದ್ದು, ಗ್ಯಾಸ್ ಸೋರಿಕೆ (Gas Leakage) ಯಾಗುತ್ತಿರುವುದರಿಂದ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಇನ್ನು ಈ ಘಟನೆಯು ಶಿರಾಡಿಘಾಟ್ (Shiradighat) ರಸ್ತೆಯ ಡಬ್ಬಲ್ ಕ್ರಾಸ್ ಬಳಿ ನಡೆದಿದೆ. ನೂರಾರು ವಾಹನಗಳು ಮಾರ್ಗಮಧ್ಯೆ ನಿಂತು ವಾಹನ ಚಾಲಕರು ಪರದಾಡುವಂತಾಗಿದೆ.

ಸೂಚನೆ: ಬೆಂಗಳೂರು-ಹಾಸನ-ಮಂಗಳೂರು
ಇನ್ನು ಈ ಮಾರ್ಗವಾಗಿ ಮಂಗಳೂರು-ಹಾಸನ-ಬೆಂಗಳೂರು (Mangalore-Hassan-Bengaluru) ಮಾರ್ಗದಲ್ಲಿ ಸಂಚರಿಸುವ ವಾಹನಗಳನ್ನು ಬದಲಿ ಮಾರ್ಗದಲ್ಲಿ ಪೊಲೀಸರು ಕಳುಹಿಸುತ್ತಿದ್ದು,

ಘಟನಾ ಸ್ಥಳಕ್ಕೆ ಅಗ್ನಿಶಾಮಕದಳ ಹಾಗೂ ಪೊಲೀಸರು ಹೋಗಿದ್ದಾರೆ. ಮಂಗಳೂರಿನ ಎಮ್.ಆರ್.ಪಿ.ಎಲ್ ನಿಂದ ತಜ್ಞರ ತಂಡ ಆಗಮಿಸಬೇಕಾಗಿದೆ. ಈ ಘಟನೆ ಸಕಲೇಶಪುರ (Sakaleshpura)

ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮಂಗಳೂರು, ಧರ್ಮಸ್ಥಳಕ್ಕೆ (Dharmasthla) ತೆರಳುವವರು ಸಕಲೇಶಪುರದಿಂದ ಹಾನುಬಾಳು ಮಾರ್ಗವಾಗಿ ಮೂಡಿಗೆರೆ ಮೂಲಕ ತೆರಳಲು ಸೂಚನೆ ಹೊರಡಿಸಿದ್ದು, ಮಂಗಳೂರಿನಿಂದ ಹಾಸನ,

ಬೆಂಗಳೂರಿಗೆ ತೆರಳುವವರು ಗುಂಡ್ಯ, ಬಿಸ್ಲೆ ಹಾಗೂ ಚಾರ್ಮಾಡಿ ಮಾರ್ಗವಾಗಿ ತೆರಳಲು ಸೂಚನೆ ನೀಡಲಾಗಿದೆ. ಪಲ್ಟಿಯಾದ ಗ್ಯಾಸ್ ಟ್ಯಾಂಕರ್‌ನಿಂದ ಭಾರಿ ಪ್ರಮಾಣದಲ್ಲಿ ಗ್ಯಾಸ್ ಸೋರಿಕೆಯಾಗಿದ್ದು,

ಗ್ಯಾಸ್ ಟ್ಯಾಂಕರ್ ತೆರವು ಕಾರ್ಯಾಚರಣೆ ಮುಗಿಯುವವರೆಗು ಎಲ್ಲಾ ವಾಹನಗಳ ಸಂಚಾರ ಬಂದ್ (Road Bandh) ಆಗಲಿದೆ.

Exit mobile version