Karnataka: ಇಡೀ ರಾಜ್ಯ ಬರಪೀಡಿತದಿಂದ ಬಳಲುತ್ತಿದ್ದು, ರಾಜ್ಯದ ರೈತರು ಮಳೆ ಬೆಲೆ ಇಲ್ಲದೆ ಕಂಗಾಲಾಗಿ (Govt Strict Notices to Banks) ಹೋಗುವಂತಾಗಿದೆ. 236
ತಾಲ್ಲೂಕುಗಳಲ್ಲಿ ಕೇವಲ 20 ತಾಲ್ಲೂಕುಗಳನ್ನು ಹೊರತುಪಡಿಸಿ ಸುಮಾರು 216 ತಾಲ್ಲೂಕುಗಳು ಬರಪೀಡಿತ ಪ್ರದೇಶಗಳಾಗಿ ಪಟ್ಟಿಗೆ ಸೇರಿದ್ದು, ಈ ಬರಗಾಲದ ಹಿನ್ನೆಲೆಯಲ್ಲಿ ಬರಪೀಡಿತ
ಪ್ರದೇಶಗಳ ರೈತರ ಸಾಲ ವಸೂಲಿ ಮಾಡದಂತೆ ಸರ್ಕಾರವು (Govt Strict Notices to Banks) ಕಟ್ಟುನಿಟ್ಟಿನ ಕ್ರಮ ಜರುಗಿಸಿದೆ.
ಬ್ಯಾಂಕ್ಗಳು (Bank) ಸಂಘ ಸಂಸ್ಥೆಗಳು, ಲೇವಾದೇವಿದಾರರು ಸದ್ಯಕ್ಕೆ ರೈತರಿಂದ ಸಾಲ ವಸೂಲಿ ಮಾಡದಂತೆ ನಿಯಂತ್ರಣ ಹೇರಲಾಗಿದ್ದು, ರಾಜ್ಯದ ವಿವಿಧ ತಾಲ್ಲೂಕುಗಳಲ್ಲಿ ಬರ ಘೋಷಣೆಗೂ
ಮುಂಚೆಯೇ ನೂರಾರು ರೈತರು ಸಾಲಕ್ಕೆ ಅಂಜಿ ಆತ್ಮಹತ್ಯೆಗೆ ಶರಣಾಗಿರುವ ಹಿನ್ನೆಲೆಯಲ್ಲಿ ಯಾವುದೇ ಸಾಲದಾತ ಸಂಸ್ಥೆಗಳು ರೈತರ ಸಾಲ ವಸೂಲಿ, ಸಾಲ ಮರುಪಾವತಿಗೆ ಒತ್ತಡ ಹೇರದಂತೆ
ಸರ್ಕಾರ ನಿರ್ಬಂಧ ಮಾಡಿದೆ.
ಸರ್ಕಾರವು ರೈತರಿಗೆ (Farmer) ಬರ ಪರಿಹಾರವು ಸೇರಿದಂತೆ ವಿವಿಧ ನೆರವಿನ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಬಹುತೇಕ ನೆರವಿನ ಯೋಜನೆಗಳ ಸೌಲಭ್ಯ ಬ್ಯಾಂಕ್ ಖಾತೆಗಳ ಮೂಲಕವೇ
ನಡೆಯುವುದರಿಂದ ರೈತರಿಗೆ ನೆರವು ತಲುಪಿಸುವ ವಿಚಾರದಲ್ಲಿ ಬ್ಯಾಂಕುಗಳು ಯಾವುದೇ ರೀತಿ ಯಡವಟ್ಟು ಮಾಡುವಂತಿಲ್ಲ ಎಂದು ಸರ್ಕಾರ ಕಠಿಣ ಸೂಚನೆ ಹೊರಡಿಸಿದೆ.
ಯಾವುದೇ ಬ್ಯಾಂಕುಗಳು ಸಾಲಗಳಿಗೆ ಬರ ಪರಿಹಾರ ಸಹಯಧನವನ್ನು ಹಾಗೂ ಬೆಳೆವಿಮೆ ಕಡಿತಗೊಳಿಸದೆ ನೇರವಾಗಿ ರೈತರ ಕೈ ಸೇರುವಂತೆ ನೋಡಿಕೊಳ್ಳಬೇಕು ಎಂದು ಬ್ಯಾಂಕ್ ಅಧಿಕಾರಿಗಳಿಗೆ
ಸೂಚಿಸಲಾಗಿದ್ದು, ಇದಕ್ಕೆ ಸಂಬಂಧಪಟ್ಟಂತೆ ವಿವಿಧ ಜಿಲ್ಲಾ ಬ್ಯಾಂಕರ್ಸ್ಗಳ ಸಲಹಾ ಸಮಿತಿ ಸಭೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಕಟ್ಟುನಿಟ್ಟಿನ ನಿರ್ದೇಶನ ಹೊರಡಿಸಲಾಗಿದೆ.
ಬೇರೆ ಉದ್ದೇಶಗಳಿಗೆ ರೈತರು ಮಡಿದ ಸಾಲವನ್ನು ವಿಮೆ ಹಾಗು ಬರ ಪರಿಹಾರ ಹಣದಲ್ಲಿ ಕಡಿತಗೊಳಿಸಬಾರದು. ಪಿ.ಎಂ.ಎಫ್.ಎಂ.ಇ (PMFME) ಯೋಜನೆ ಸಾಲಗಳನ್ನು ಎಲ್ಲಾ ಬ್ಯಾಂಕುಗಳು
ತ್ವರಿತಗತಿಯಲ್ಲಿ ರೈತರಿಗೆ ಮಂಜೂರು ಮಾಡಬೇಕು. ಮಳೆ ಕೊರತೆಯಿಂದ ರೈತರು ಕಂಗಾಲಾಗಿದ್ದು, ಬ್ಯಾಂಕುಗಳು ರೈತರಿಗೆ ಯಾವುದೇ ಒತ್ತಡ ಹೇರಬಾರದು ಎಂದು ಸೂಚಿಸಲಾಗಿದೆ.
ಇದನ್ನು ಓದಿ: ಪಟಾಕಿ ಬ್ಯಾನ್: ಕರ್ನಾಟಕದಾದ್ಯಂತ ಪಟಾಕಿ ಬ್ಯಾನ್ ಮಾಡಲು ಚಿಂತನೆ, ಗೃಹ ಸಚಿವ ಜಿ ಪರಮೇಶ್ವರ್
- ಭವ್ಯಶ್ರೀ ಆರ್.ಜೆ