Bengaluru: ಇಂದು (ಸೆ.29) ಕರ್ನಾಟಕ ಬಂದ್ (GParameshwara Appeals for Bandh) ಆಚರಿಸಲಾಗುತ್ತಿದ್ದು, ಕಾವೇರಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯದ ವಿವಿದೆಡೆ
ಹಲವು ಸಂಘಟನೆಗಳು ರಸ್ತೆಗಳಿದು ಪ್ರತಿಭಟನೆ ಮಾಡುತ್ತಿವೆ. ಇನ್ನು ಬಂದ್ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಕಣ್ಗಾವಲಾಗಿದ್ದು, , ಈ ಕರ್ನಾಟಕ ಬಂದ್
ಬಗ್ಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ (Dr. G Parameshwara) ಪ್ರತಿಕ್ರಿಯಿಸಿದ್ದಾರೆ.
ರಾಜ್ಯದ ವಿವಿದೆಡೆ ಹಲವು ಸಂಘಟನೆಗಳು ರಸ್ತೆಗಳಿದು ಪ್ರತಿಭಟನೆ ಮಾಡುತ್ತಿದ್ದು, ಈ ಬಂದ್ಗೆ ಪ್ರತಿಕ್ರಿಯಿಸಿರುವ ಗ್ರಹ ಸಚಿವರು ಬಂದ್ ಮಾಡುವುದರಿಂದ ಏನು ಉಪಯೋಗವಿಲ್ಲ. ಹೋರಾಟಗಾರರು
ಕಾನೂನು ರೀತಿಯಲ್ಲಿ ನಡೆದುಕೊಳ್ಳಬೇಕು ಮತ್ತು ರಾಜ್ಯದ ಹಿತ ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳ ಜೊತೆ ಮಾತನಾಡಿದ ಪರಮೇಶ್ವರ್ ಅವರು ಕಾನೂನಿನ ಪ್ರಕಾರ ಬಂದ್ ಮಾಡಬಾರದು. ಸರ್ಕಾರದೊಂದಿಗೆ ಸಹಕರಿಸಬೇಕು ಎಂದು ಪ್ರತಿಭಟನೆ
ಹಾಗೂ ಬಂದ್ ಮಾಡುವವರಿಗೆ ಮನವಿ ಮಾಡಿದ್ದೇನೆ. ಮುಂದುವರೆದರೆ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದ್ದೇವೆ. ಹಾಗಾಗಿ ಈ ಬಂದ್ಗೆ ಸಹಕರಿಸುತ್ತಾರೆ ಎಂಬ
ವಿಶ್ವಾಸವಿದೆ (GParameshwara Appeals for Bandh) ಎಂದು ಹೇಳಿದರು.
ಯಾರನ್ನು ಸುಮ್ಮನೆ ಬಂಧಿಸುವುದಿಲ್ಲ ಆದರೆ ಕಾನೂನು ವಿರುದ್ಧ ನಡೆದುಕೊಂಡರೆ ಬೇರೆ ವಿಧಿಯಿಲ್ಲ. ದೇಶದಲ್ಲಿ ಬಂದ್ ಮಾಡಬಾರದು ಎಂದು ಸುಪ್ರೀಂ ಕೋರ್ಟ್ (Supreme Court) ಆದೇಶ ಕೊಟ್ಟಿದೆ.
ಅದನ್ನು ನಾವು ಸರಿಯಾದ ಕ್ರಮ ತೆಗೆದುಕೊಳ್ಳಲಿಲ್ಲ ಎಂದರೆ ಕೋರ್ಟ್ ಸರ್ಕಾರವನ್ನು ಹೊಣೆ ಮಾಡುತ್ತದೆ.
ಸಾರ್ವಜನಿಕರಿಗೆ ತೊಂದರೆ ಆಗುತ್ತದೆ. ಕೋಟ್ಯಂತರ ರೂಪಾಯಿ ನಷ್ಟ ಆಗುತ್ತದೆ. ಒಂದೆಡೆ ಬರಗಾಲ ಎದುರಿಸುತ್ತಿದ್ದು, ಅಲ್ಲೂ ಸಹ ಸಾಕಷ್ಟು ನಷ್ಟವಾಗಿದೆ. ಇನ್ನೊಂದು ಕಡೆ ಬಂದ್ ಮಾಡುವುದರಿಂದ
ಉಪಯೋಗವಿಲ್ಲ ಆದರೆ ಲಾಭ ಆಗುವಂತ್ತಿದ್ದರೆ ಬಂದ್ ಮಾಡಿ ಎಂದು ಹೇಳಬಹುದು ಎಂದರು.
ಇದನ್ನು ಓದಿ : ಕರ್ನಾಟಕ ಬಂದ್: ಪ್ರಯಾಣಿಕರು ಕಡಿಮೆ ಇದ್ದರು ರಸ್ತೆಗಿಳಿದ ಬಿಎಂಟಿಸಿ, ಎಂದಿನಂತೆ ಮೆಟ್ರೋ ಓಡಾಟ
- ಭವ್ಯಶ್ರೀ ಆರ್.ಜೆ