ಅಕ್ಷರ ಸಂತನಿಗೆ ನ. 8ಕ್ಕೆ ಪದ್ಮಶ್ರೀ ಪುರಸ್ಕಾರ. ಯಾರು ಈ ಅಕ್ಷರ ಸಂತ ?

ಅಕ್ಷರ ಸಂತ ಎಂಬ ಬಿರುದಿನಿಂದ ನಾಮಾಂಕಿತಗೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಹೇರಕಳ ಹಾಜಬ್ಬರನ್ನು 2020ನೇ ಸಾಲಿನ ಪದ್ಮಶ್ರೀ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದ್ದು, ನವೆಂಬರ್ 8ರಂದು ದೆಹಲಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರಿಂದ ಪದ್ಮಶ್ರೀ ಗೌರವ ಸ್ವೀಕರಿಸಲಿದ್ದಾರೆ.

ಹಳ್ಳಿಯ ಬಡ ವ್ಯಕ್ತಿಯೊಬ್ಬರು ಮಂಗಳೂರು ವಿಶ್ವವಿದ್ಯಾನಿಲಯ, ಹಂಪಿ ವಿಶ್ವವಿದ್ಯಾಲಯ, ಕುವೆಂಪು ವಿಶ್ವವಿದ್ಯಾಲಯ, ಕೇರಳದ ಕನ್ನಡ ಶಾಲೆಯ ಪಠ್ಯದ ವಿಷಯದ ಎತ್ತರಕ್ಕೆ ಬೆಳೆದು  ಅಕ್ಷರ ಸಂತನಾಗಿ ಗುರುತಿಸಿಕೊಂಡಿದ್ದಾರೆ. ಬಡ ಮಕ್ಕಳಿಗಾಗಿ ಕಾಲೇಜ್‌ ಮತ್ತು ಐಟಿಐ ಆರಂಬಿಸುವ ಕನಸು ಕಾಣುತ್ತಿದ್ದಾರೆ, ಅದಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ, ಅನಾರೋಗ್ಯ ನಡುವೆಯೂ ಮಕ್ಕಳಿಗೆ ಶಿಕ್ಷಣ ಕೊಡುವ ಉತ್ಸಾಹ ಬತ್ತುತ್ತಿಲ್ಲ.

2020 ರಲ್ಲೇ ಅವರಿಗೆ ಪ್ರಶಸ್ತಿ ಘೋಷಣೆಯಾಗಿತ್ತು. ಆದರೆ ಕೊರೊನಾ ಕಾರಣದಿಂದಾಗಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ಮುಂದುಡಲಾಗಿತ್ತು.ಆದರೆ ಇದೀಗ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ದಿನಾಂಕ ನಿಗದಿಯಾಗಿದ್ದು ನವೆಂಬರ್ 8 ರಂದು ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ.

Exit mobile version