ಹೆಲಿಕಾಪ್ಟರ್ ಮೂಲಕ ಬಂದ ವರ ಬೆಂಗಳೂರಲ್ಲಿ ಅದ್ಧೂರಿ ಮದುವೆ

ಬೆಂಗಳೂರು, ನ. 02: ತುಮಕೂರಿನ ಬಲರಾಮ ಶೆಟ್ಟಿ ಹಾಗೂ ರಮಾದೇವಿ ಪುತ್ರ ನಿರೂಪ್ ಅವರು  ಬೆಂಗಳೂರಿನ ಐಶ್ವರ್ಯಾ ಜೊತೆ ಅದ್ದೂರಿಯಾಗಿ ಅದರಲ್ಲೂ ವಿಶೇ‍ವಾಗಿ ತುಮಕೂರಿನಿಂದ ಹೆಲಿಕಾಪ್ಟರ್ ಮೂಲಕ ನಿರೂಪ್ ಕುಟುಂಬ ಕಲ್ಯಾಣ ಮಂಟಪಕ್ಕೆ ಬಂದಿಳಿದದ್ದು ವಿಶೇ‍ವಾಗಿ ಎಲ್ಲರ ಗಮನ ಸೆಳೆಯಿತು. ನಿರೂಪ್ ಅವರು ಬ್ಯಸಿನೆಸ್ ಮ್ಯಾನ್ ಆಗಿದ್ದು  ಅವರ ಮದುವೆ ಬೆಂಗಳೂರಿನ ತಲಘಟ್ಟಪುರ ಬಿಆರ್ ಎಸ್ ಗ್ರಾಂಡ್ಯುರ್‌ನಲ್ಲಿನಡೆಯುತ್ತಿದ್ದು, ಈ ಮದುವೆ ಮಂಗಳವಾರ ಮತ್ತು ಬುದವಾರ ನಡೆಯಲಿದ್ದು ಸಾರ್ವಜನಿಕರಿಗಿದು ಬರ್ಜರಿ ಕುತೂಹಲ  ಮೂಡಿಸಿದೆ.

ನಗರದ ಗುಬ್ಬಿಗೇಟ್‌ನ ಹೆಲಿಪ್ಯಾಡ್‌ನಿಂದ ಬೆಳಿಗ್ಗೆ ಹೆಲಿಕಾಪ್ಟರ್ ಹತ್ತಿದ ನಿರೂಪ್ ಕುಟುಂಬ  ಅತಿ ವೇಗವಾಗಿ ತಲುಪಿದ್ದು ವಧು ಕಡೆಯವರು ಹರ್ಷೋದ್ಗಾರದಿಂದ ಬರಮಾಡಿಕೊಂಡಿದ್ದಾರೆ ಸಾಮಾನ್ಯವಾಗಿ ಬಸ್ ಕಾರುಗಳಲ್ಲಿ ಬೆಂಗಳೂರಿಗೆ ತುಮಕೂರಿಂದ ಬರಲು ಹಿಡಿಯುವ ಸಮಯ ಒಂದೂವರೆ ಗಂಟೆ. ಬಲರಾಮ್ ಶೆಟ್ಟಿಯವರು ತಮ್ಮ ಮಗನ ಮದುವೆಯನ್ನು ವಿಶೇಷ ರೀತಿಯಲ್ಲಿ ನಡೆಸಿ ಸುದ್ದಿಯಾಗುತ್ತಿದ್ದಾರೆ.

Exit mobile version