ನನ್ನ ತಂಟೆಗೆ ಬಂದ್ರೇ ನಾನು ಯಾರನ್ನು ಸುಮ್ಮನೆ ಬೀಡಲ್ಲ: ಸಂಸದ ರಮೇಶ ಜಿಗಜಿಣಗಿ, ಯತ್ನಾಳ್‌ ವಿರುದ್ಧ ಪರೋಕ್ಷ ವಾಗ್ದಾಳಿ

ವಿಜಯಪುರ, ಮಾ. 02: ನನ್ನ ತಂಟೆಗೆ ಬಂದರೆ ಯಾರನ್ನೂ ನಾನು ಸುಮ್ಮನೆ ಬಿಡಲ್ಲ ಎಂದು ಸಂಸದ ರಮೇಶ ಜಿಗಜಿಣಗಿ ಪರೋಕ್ಷವಾಗಿ ಬಸನಗೌಡ ಪಾಟೀಲ್ ಯತ್ನಾಳ್‌ ಹೆಸರು ಹೇಳದೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ನನ್ನ 45 ರಾಜಕಾರಣದ ವರ್ಷದಲ್ಲಿ ನಾನು ಯಾರನ್ನು ಕೆಣಕಿಲ್ಲ. ನನ್ನನ್ನು ಕೆಣಕಿದ್ರೆ ನಾನು ಸುಮ್ಮನೆ ಬಿಡುವುದಿಲ್ಲ. ನನ್ನ ತಂಟೆಗೆ ಬರಬೇಡಿ ಎಂದು ಅವರಿಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ ಎಂದು ವಿಜಯಪುರ ರೈಲ್ವೇ ಮೇಲ್ಸೇತುವೆ ಉದ್ಘಾಟನೆ ವೇಳೆಯಲ್ಲಿ ವಿರೋಧಿಗಳಿಗೆ ಎಚ್ಚರಿಕೆ ಸಂದೇಶವನ್ನು ಹೊರ ಹಾಕಿದರು.

ಕೆಲವರು ನಮಗೆ ವಿರೋಧ ಮಾಡೋದು ನಿಜ. ನಾವು ಯಾರ ಹೆಸರನ್ನು ಸಹ ಹೇಳುವುದಿಲ್ಲ. ವಿರೋಧಿಸುವವರು ಏನಾದರೂ ಮಾಡಕೊಳ್ಳಲಿ. ನನ್ನ 45 ವರ್ಷದ ರಾಜಕಾರಣ ಬಲ್ಲವರಿಗೆ ನನ್ನ ಬಗ್ಗೆ ಗೊತ್ತು. ಅನವಶ್ಯಕವಾಗಿ ನಮ್ಮ ತಂಟೆಗೆ ಬರಬೇಡಿ ಎಂದು ಪರೋಕ್ಷವಾಗಿ ಕೈ ಮುಗಿದು ಹೇಳತ್ತೇನೆ. ನನ್ನ ವಿಜಯಪುರ ಜನತೆ 45 ವರ್ಷಗಳಿಂದ ರಾಜಕಾರಣದಲ್ಲಿ ನನ್ನನ್ನು ಉಳಿಸಿಕೊಂಡಿದ್ದರಿಂದ ವಿಜಯಪುರ ಜನತೆ ಸೇವೆ ಸಲ್ಲಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

Exit mobile version