ಕೋವಿಡ್ (Covid) ಸಮಯದಲ್ಲಿ ಹೆಚ್ಚು ಆರೋಗ್ಯ ಸಲಹೆ ನೀಡಿ ಮನೆಮಾತಾದ ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿಯು (ಐಸಿಎಂಆರ್) ಇತ್ತಿಚೆಗೆ ಆರೋಗ್ಯ ರಕ್ಷಣೆಗೆ ಸಂಬಂಧಿಸಿದಂತೆ ಸಲಹೆ ಸೂಚನೆ ಬಿಡುಗಡೆ ಮಾಡಿತ್ತು. ಈ ವರದಿಗಳ ಪ್ರಕಾರ ಬೇಳೆಕಾಳು (Dal)ಗಳನ್ನು ತಿನ್ನುವುದು ಸೇರಿದೆ, ಆದರೆ ಅವುಗಳ ಸ್ವರೂಪ ಹೇಗಿರಬೇಕು ಎಂದು ತಿಳಿಸಿ ಎಚ್ಚರಿಕೆ ಘಂಟೆ ಭಾರಿಸಿದೆ.
ಅರೇ ನಾವು ನಿತ್ಯವೂ ಬೇಳೆಕಾಳುಗಳನ್ನು ಬಳಸುತ್ತೇವೆ ಅದರಲ್ಲೇನಿದೆ ಬದಲಾವಣೆ ಅಂತೀರಾ, ಬೆಳೆಕಾಳುಗಳ ಹೆಚ್ಚು ಬೇಯಿಸುವಿಕೆಗೆ ಕಡಿವಾಣ ಹಾಕಲು ಐಸಿಎಂಆರ್ (ICMR) ಸೂಚನೆ ನೀಡಿದೆ. ಹೆಚ್ಚು ಬೇಯಿಸುವ ಪ್ರಕ್ರಿಯೆಯಿಂದ ಪೋಷಕಾಂಶಗಳು ನಷ್ಟವಾಗುವ ಬಗ್ಗೆ ವರದಿಯಲ್ಲಿ ಪರಿಣಿತರು ವಿಶ್ಲೇಷಣೆ ಮಾಡಿದ್ದಾರೆ.
ಬೇಳೆಕಾಳುಗಳನ್ನು ಹೆಚ್ಚಾಗಿ ಬೇಯಿಸದೆ, ಸಾಧಾರಣವಾಗಿ ಅಥವಾ ಕುಕ್ಕರ್ನಲ್ಲಿ (Cooker) ಬೇಯಿಸುವುದು, ಇದರಿಂದ ಬೇಳೆಕಾಳುಗಳಲ್ಲಿನ ಪೋಷಕಾಂಶ ಪ್ರಮಾಣ ಕಡಿಮೆಯಾಗುತ್ತದೆ. ಬೇಳೆಕಾಳುಗಳನ್ನು ಅಗತ್ಯಕ್ಕೆ ತಕ್ಕ ನೀರು ಮಾತ್ರ ಬಳಸಿ ಬೇಯಿಸುವುದು, ಕಡಮೆ ಅವಧಿಯಲ್ಲಿ ಬೇಯಿಸಿ ಬಳಸಿದರೆ ದೇಹಾರೋಗ್ಯಕ್ಕೆ ಅನುಕೂಲ ಎಂದು ವರದಿಯಲ್ಲಿ ತಿಳಿಸಿದೆ.
ಭಾರತೀಯ ಅಡುಗೆಯಲ್ಲಿ ಸಹಜವಾಗಿ ದೊರೆಯುವ ಬೇಳೆಕಾಳುಗಳು, ಸೊಪ್ಪು ತರಕಾರಿಯ ಅತಿಯಾದ ಬೇಯಿಸುವಿಕೆಯಿಂದ ಆರೋಗ್ಯವರ್ಧಕ ಅಂಶಗಳು ನಷ್ಟವಾಗುತ್ತಿರುವ ಬಗ್ಗೆ ಸಂಶೋಧನೆಗಳು ತಿಳಿಸಿದ ಬಳಿಕ ಐಸಿಎಂಆರ್ ಹೆಚ್ಚು ಆರೋಗ್ಯದ ಸಮಸ್ಯೆ (Health Issues) ಗಳಿಗೆ ನಿರ್ಲಕ್ಷಿತ ಆಹಾರ ಸೇವನೆಯೇ ಕಾರಣ ಎಂದು ಗುರುತಿಸಿದೆ. ಶುದ್ಧ, ರುಚಿಯಾದ, ತರಕಾರಿ, ಬೇಳೆಕಾಳುಗಳ ಆಹಾರ ಸೇವನೆ ಆರೋಗ್ಯ ವರ್ಧನೆಗೆ ಅಗತ್ಯ ಎಂಬುದೇ ವರದಿಯ ಉದ್ದೇಶವಾಗಿದೆ.