ಜನರಿಗೆ ಉದ್ಯೋಗ ನೀಡುವುದು ಸರ್ಕಾರದ ಕರ್ತವ್ಯ : ಸಿದ್ದರಾಮಯ್ಯ!

congress

ದೇಶದ ಜನರಿಗೆ ಉದ್ಯೋಗ(Job) ನೀಡುವುದು ಸರ್ಕಾರದ ಕರ್ತವ್ಯ. ಆದರೆ ಇಂದು ಕೇಂದ್ರ ಸರ್ಕಾರದ(Central Government) ಆರ್ಥಿಕ ನೀತಿಗಳಿಂದ ಉದ್ಯೋಗಗಳು ನಶಿಸಿ ಹೋಗುತ್ತಿವೆ. ನೋಟು ಅಮಾನ್ಯ ಮತ್ತು ಕೊರೋನಾದಿಂದ ಈ ಸ್ಥಿತಿ ಉಂಟಾಗಿದೆ ಎಂದು ವಿಪಕ್ಷ ನಾಯಕ(Opposition Leader) ಸಿದ್ದರಾಮಯ್ಯ(Siddaramaiah) ಹೇಳಿದರು.

ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಮಠದಲ್ಲಿ ಆರಂಭಗೊಂಡ ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2016ರಲ್ಲಿ ನೋಟು ಅಮಾನ್ಯಕ್ಕೂ ಮುಂಚೆ ನಮ್ಮ ದೇಶದಲ್ಲಿ ಸುಮಾರು 11 ಕೋಟಿ ಉದ್ಯೋಗಗಳನ್ನು ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳು ಸೃಷ್ಟಿಸಿದ್ದವು. ನೋಟು ನಿಷೇಧದಿಂದ ದಿವಾಳಿಯಾದ ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆಗಳು ಇಂದು ಕೇವಲ 2.5 ಲಕ್ಷ ಉದ್ಯೋಗಗಳನ್ನು ಮಾತ್ರ ನೀಡುತ್ತಿವೆ. ಸಾಮಾನ್ಯ ಜನರ ಜೀವನಾಡಿಯಾಗಿದ್ದ ಸಣ್ಣ ಕೈಗಾರಿಕೆಗಳು ಇಂದು ನಶಿಸಿ ಹೋಗುತ್ತಿದೆ ಎಂದರು.

ಇನ್ನು ಕಾಂಗ್ರೆಸ್(Congress) ಪಕ್ಷ ಅಧಿಕಾರ ಹಿಡಿಯಬೇಕು ಎಂಬ ಕಾರಣದಿಂದ ಸ್ವಾತಂತ್ರ್ಯ ಹೋರಾಟ ಮಾಡಿದ್ದಲ್ಲ. ಬ್ರಿಟಿಷರನ್ನು ದೇಶದಿಂದ ಓಡಿಸಬೇಕು. ನಮ್ಮನ್ನು ನಾವೇ ಆಳಬೇಕು ಎಂಬ ನಿಸ್ವಾರ್ಥ ಮನೋಭಾವದಿಂದ ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದೆ. ಈ ಹೋರಾಟದಲ್ಲಿ ಸಾವಿರಾರೂ ಜನರು ಹುತಾತ್ಮರಾಗಿದ್ದಾರೆ. ಆಸ್ತಿಪಾಸ್ತಿಗಳ್ನು ಕಳೆದುಕೊಂಡಿದ್ದಾರೆ. ಅವರೆಲ್ಲರ ತ್ಯಾಗ ಮತ್ತು ಬಲಿದಾನವನ್ನು ನೆನಪಿಸಿಕೊಳ್ಳುವುದು ಮತ್ತು ಅಳವಡಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಇನ್ನು ಪದವಿ ಪಡೆದ ಯುವಕನಿಗೆ ಸರ್ಕಾರ ಉದ್ಯೋಗ ನೀಡದಿದ್ದರೆ ಆತ ನಿರಪಯುಕ್ತನಾಗುತ್ತಾನೆ. ದೇಶಕ್ಕೆ ಅವನ ಕೊಡುಗೆ ಶೂನ್ಯವಾಗುತ್ತದೆ. ಇನ್ನು ಉದ್ಯೋಗ, ಉದ್ಯಮ ಮತ್ತು ಕಾನೂನು ಸುವ್ಯವಸ್ಥೆಗೆ ನೇರ ಸಂಬಂಧವಿದೆ. ಹೊಸ ಉದ್ಯಮಗಳು ಮತ್ತು ಬಂಡವಾಳ ರಾಜ್ಯಕ್ಕೆ ಬರಬೇಕಾದರು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಉತ್ತಮವಾಗಿರಬೇಕು. ಆದರೆ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ನಂತರ ಕಳೆದ ಎರಡು ವರ್ಷಗಳಿಂದ ರಾಜ್ಯಕ್ಕೆ ಯಾವುದೇ ಹೂಡಿಕೆದಾರರು ಬಂದಿಲ್ಲ ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.

Exit mobile version