ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ಹರಕೆ ಕುರಿಯ ಹಾರಕ್ಕೆ ಹೋಲಿಸಿ ನಟ ಜಗ್ಗೇಶ್ ಲೇವಡಿ

Bengaluru: ಸದಾ ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆ ನೀಡುವಲ್ಲಿ ನಟ ಜಗ್ಗೇಶ್ (Actor Jaggesh) ಎಂದಿಗೂ ಹಿಂದೆ ಬಿದ್ದಿಲ್ಲ. ನಟನೆಯೊಂದಿಗೆ ಬಿಜೆಪಿಯ ರಾಜ್ಯಸಭಾ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿರುವ ಅವರು ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಕಾಂಗ್ರೆಸ್ (Congress) ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತಾಗಿ ಹರಕೆ ಕುರಿಗೆ ಹಾರ ಹಾಕಿ ಮೆರವಣಿಗೆ ಮಾಡ್ತಾರೆ ಈ ಹಾರಗಳೇ ಗ್ಯಾರಂಟಿ ಯೋಜನೆಗಳು ಎಂದು ಲೇವಡಿ ಮಾಡಿದ್ದಾರೆ.

ಈ ಹಿಂದೆ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಉಚಿತ ಬಸ್ ನೀಡುವುದಾಗಿಯೂ ಎಲ್ಲರಿಗೂ ಉಚಿತ ವಿದ್ಯುತ್ ಹಾಗೂ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಸೇರಿ ಐದು ಗ್ಯಾರಂಟಿ ಯೋಜನೆಗಳನ್ನು ನೀಡುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು.ಅಧಿಕಾರಕ್ಕೆ ಬಂದ ಬಳಿಕ ಅವರು ನುಡಿದಂತೆ ನಡೆದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೇತೃತ್ವದ ಸರ್ಕಾರ ಎಲ್ಲರಿಗೂ 200 ಯುನಿಟ್ ಉಚಿತ ವಿದ್ಯುತ್, ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ಮಾಡಿದೆ. ಇದನ್ನು ಜಗ್ಗೇಶ್ ಈ ಎಲ್ಲ ಯೋಜನೆಗಳಿಂದ ಜನರಿಗೇ ನಷ್ಟ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ.

ಈ ಫ್ರೀ ಸ್ಕೀಮ್ ಗಳು (Free Scheme) ಲೋಕಸಭಾ ಚುನಾವಣೆ ಮುಗಿಯುವ ತನಕ ಮಾತ್ರ. ಫ್ರೀ ಎಂದುಕೊಂಡು ಸಂತೋಷ ಪಡಬೇಡಿ . ಇದನ್ನ ಇಸ್ಕೊಂಡ್ರೆ ನಿಮ್ಮ ಸ್ವಾಭಿಮಾನ ಮಾಡಿಕೊಂಡಂತೆ. ಮತದಾರರ ಬಲಿ ಹಾಕಲು ಮಾಡಿರುವ ಸ್ಕೀಮ್ ಗಳಿವು. ಇನ್ನು ಮೋದಿ ಸರ್ಕಾರದಿಂದ (Modi Government) ನೀಡುವ ಗ್ಯಾರಂಟಿಗಳನ್ನು ಮಾತ್ರ ನಂಬಬಹುದು. ಅದು ಜನಪರವಾದದ್ದು ಎಂದು ಜಗ್ಗೇಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Exit mobile version