ಜಗ್ಗೇಶ್ vs ಡಿ’ಬಾಸ್ ವಿವಾದ: ತಮ್ಮ ಅಭಿಮಾನಿಗಳ ಪರವಾಗಿ ಕ್ಷಮಾಪಣೆ ಕೇಳಿದ ನಟ ದರ್ಶನ್‌

ಬೆಂಗಳೂರು, ಫೆ. 25: ಕನ್ನಡ ಚಿತ್ರರಂಗದಲ್ಲಿ ಸಂಚಲನ ಮೂಡಿಸಿರುವ ನವರಸ ನಾಯಕ ಜಗ್ಗೇಶ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಫ್ಯಾನ್ಸ್ ನಡುವಿನ ಗೊಂದಲದ ಕುರಿತು ಕಡೆಗೂ ಮೌನ ಮುರಿದಿರುವ ಡಿ’ಬಾಸ್, ಶೂಟಿಂಗ್‌ ಸಮಯದಲ್ಲಿ ನಟ ಜಗ್ಗೇಶ್‌ ಅವರಿಗೆ ಘೇರಾವ್‌ ಹಾಕಿ ವಾಗ್ವಾದಕ್ಕಿಳಿದ ಹಿನ್ನೆಲೆಯಲ್ಲಿ ತಮ್ಮ ಅಭಿಮಾನಿಗಳ ಪರವಾಗಿ ನಟ ದರ್ಶನ್‌ ಕ್ಷಮಾಪಣೆ ಕೇಳಿದ್ದಾರೆ.

ಖಾಸಗಿ ಸುದ್ದಿವಾಹಿನಿಯೊಂದರ ಸಂದರ್ಶನದಲ್ಲಿ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟ ದರ್ಶನ್, ಜಗ್ಗೇಶ್‌ ಅವರು ಹಿರಿಯರು ನಾವು ಯಾವಾಗಲೂ ಅವರ ಹಿಂದೆ ಇರುತ್ತೇವೆ. ಅವರು ತೋರಿದ ದಾರಿಯಲ್ಲೇ ನಾವು ನಡೆಯುತ್ತಿದ್ದೇವೆ ಎಂದು ಹೇಳಿ ವಿವಾದಕ್ಕೆ ತೆರೆ ಎಳೆದಿದ್ದಾರೆ.

ಅಲ್ಲದೇ, ಜಗ್ಗೇಶ್‌ ಹಿರಿಯರು ಅವರು ಏನೇ ಮಾತನಾಡಿದರೂ ಅದು ನಮ್ಮ ಬಗ್ಗೆ ತಾನೆ. ಅದಕ್ಕೆ ಬೇಸರಪಟ್ಟಿಕೊಳ್ಳುವ ಯಾವ ಪ್ರಮೇಯವಿಲ್ಲ ಎಂದು ದರ್ಶನ್‌ ಹೇಳಿದ್ದಾರೆ.

ನಿರ್ಮಾಪಕರ ಜೊತೆ ಮಾತನಾಡುವಾಗ ದರ್ಶನ್‌ ಅಭಿಮಾನಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಮೇಲೆ ತೋತಾಪುರಿ ಶೂಟಿಂಗ್‌ ನಡೆಯುವ ಸಂದರ್ಭದಲ್ಲಿ ದರ್ಶನ್‌ ಅಭಿಮಾನಿಗಳು ಜಗ್ಗೇಶ್‌ ಅವರನ್ನು ಸುತ್ತುವರಿದು ವಾಗ್ವಾದಕ್ಕಿಳಿದರು. ಇದಾದ ನಂತರ ನಡೆದ ಎಲ್ಲಾ ಬೆಳವಣಿಗೆಗಳು ಕನ್ನಡ ಚಿತ್ರರಂಗದಲ್ಲಿ ದೊಡಮಟ್ಟದ ಸಂಚಲನ ಮೂಡಿಸಿತು.

Exit mobile version