ಖ್ಯಾತ ಸಾಹಿತಿ ಡಾ.ಹೆಚ್.ಎಸ್.ವೆಂಕಟೇಶ್ ಮೂರ್ತಿ ಪ್ರಥಮ ಬಾರಿಗೆ ಪ್ರಧಾನಪಾತ್ರದಲ್ಲಿ ಅಭಿನಯಿಸಿರುವ ‘ಅಮೃತ ವಾಹಿನಿ’ ಚಿತ್ರ ಜನವರಿ 8 ರಂದು ತೆರೆಗೆ ಬರಲಿದೆ.
ಯು. ವಿ. ಪ್ರೊಡಕ್ಷನ್ ಲಾಂಛನದಲ್ಲಿ ಅನಂತಪದ್ಮನಾಭ ಅರ್ಪಿಸುವ, ಈ ಚಿತ್ರವನ್ನು ಕೆ. ಸಂಪತ್ ಕುಮಾರ್ ಹಾಗೂ ಅಕ್ಷಯ್ ರಾವ್ ನಿರ್ಮಿಸಿದ್ದಾರೆ.
ಕೌಟುಂಬಿಕ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ರಾಘವೇಂದ್ರ. ಬಿ. ಪಾಟೀಲ್ ಕಥೆ ಬರೆದಿದ್ದು, ಕೆ.ನರೇಂದ್ರ ಬಾಬು ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ಕೆ.ನರೇಂದ್ರ ಬಾಬು ಈ ಹಿಂದೆ ಪಲ್ಲಕ್ಕಿ, ಯುವ, ಓ ಗುಲಾಬಿ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಡಾ.ಹೆಚ್ ಎಸ್ ವೆಂಕಟೇಶ್ ಮೂರ್ತಿ ಅವರೆ ಈ ಚಿತ್ರದ ಹಾಡುಗಳನ್ನು ಬರೆದಿದ್ದು, ಉಪಾಸನಾ ಮೋಹನ್ ಸಂಗೀತ ನೀಡಿದ್ದಾರೆ. ಶಿವಾನಂದ್ ಸಂಭಾಷಣೆ ಬರೆದಿದ್ದಾರೆ. ಗಿರಿಧರ್ ದಿವಾನ್ ಛಾಯಾಗ್ರಹಣ ಹಾಗೂ ಕೆ.ಗಿರೀಶ್ ಕುಮಾರ್ ಸಂಕಲನ ಈ ಚಿತ್ರಕ್ಕಿದೆ. ಡಾ.ಎಚ್. ಎಸ್. ವೆಂಕಟೇಶ್ ಮೂರ್ತಿ,ವೈದ್ಯ ಶಿವಮೊಗ್ಗ, ಸಂತೋಷ್ ಕರ್ಕಿ,ಮಧು ಸಾಗರ್, ಮಂಜೇಶ್ ಕಲಾಲ್, ಭಾಸ್ಕರ್, ಜಗದೀಶ್, ಮಂಜುನಾಥ್ ಬೂದಿಹಾಳಮಟ್, ಮಾ.ಆರ್ಯನ್ ಸೂರ್ಯ, ಡಾ.ವತ್ಸಲಾ ಮೋಹನ್, ಸುಪ್ರಿಯಾ. ಎಸ್. ರಾವ್, ಗೀತಾ ಸೂರ್ಯವಂಶಿ, ಆರ್. ಟಿ. ರಮಾ, ಬೇಬಿ ಋತ್ವಿ, ಡಾ.ಶೈಲಾ ಮೊದಲಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಅಮೃತ ವಾಹಿನಿ ಈಗಾಗಲೇ ಕೊಲ್ಕತ್ತಾ ಚಲನಚಿತ್ರೋತ್ಸವದಲ್ಲಿ(CClT) ಪ್ರದರ್ಶನವಾಗಿದ್ದು, ಉತ್ತಮ ಚಲನಚಿತ್ರ ಪ್ರಶಸ್ತಿಗೆ ಭಾಜನವಾಗಿದೆ.