ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ಗೆ ಪುತ್ರಿಯ ವಿವಾಹ ಆರತಕ್ಷತೆಯ ಆಮಂತ್ರಣ ನೀಡಿದ ನಟ ರಮೇಶ್ ಅರವಿಂದ್

ಬೆಂಗಳೂರು, ಜ. 06: ನಟ ರಮೇಶ್​ ಅರವಿಂದ್ ಮಂಗಳವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಅವರಿಗೆ ತಮ್ಮ ಪುತ್ರಿಯ ವಿವಾಹ ಆರತಕ್ಷತೆಯ ಆಮಂತ್ರಣ ನೀಡಿ ಆಹ್ವಾನಿಸಿದರು.

ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ತೆರಳಿದ ನಟ ರಮೇಶ್, ತಮ್ಮ ಪುತ್ರಿ ಐಶ್ವರ್ಯ ಹಾಗೂ ಅಕ್ಷಯ್ ಅವರ ವಿವಾಹ ಆರತಕ್ಷತೆಯ ಆಹ್ವಾನ ಪತ್ರಿಕೆ ನೀಡಿದರು. ರಮೇಶ್ ಅರವಿಂದ್​ ಈ ಹಿಂದೆ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸಹ ತಮ್ಮ ಪುತ್ರಿಯ ವಿವಾಹ ಆರತಕ್ಷತೆಯ ಆಮಂತ್ರಣ ಪತ್ರ ನೀಡಿದ್ದರು.

Exit mobile version