ʻಚಿತ್ರರಂಗಕ್ಕೆ ಕಪ್ಪು ಚುಕ್ಕಿ ಇಟ್ಟ ಈ ಘಟನೆ ಎಸಗಿದವರ ಸಣ್ಣತನ, ಹೇಡಿತನ ಮಾತ್ರ ಬಹಿರಂಗವಾಗಿದೆʼ : ಸಂಸದೆ ಸುಮಲತಾ

Bengaluru : ಕ್ರಾಂತಿ ಚಿತ್ರದ ಎರಡನೇ ಹಾಡನ್ನು ಅಭಿಮಾನಿಗಳಿಂದ ಬಿಡುಗಡೆಗೊಳಿಸಲು ಹೊಸಪೇಟೆಗೆ ತೆರಳಿದ್ದ ನಟ ಚಾಲೆಂಜಿಂಗ್‌ ಸ್ಟಾರ್‌ ನಟ ದರ್ಶನ್‌(kranthi movie tweet by sumalatha) ಮೇಲೆ ಕಿಡಿಗೇಡಿಗಳು ಚಪ್ಪಲಿ ಎಸೆದ ಕೃತ್ಯಕ್ಕೆ ಇದೀಗ ನಾಡಿನೆಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ನಟ ದಾಸ ದರ್ಶನ್‌ ಅಭಿನಯದ ʻಕ್ರಾಂತಿʼ(Kranthi) ಚಿತ್ರ ಇದೇ 23 ಜನವರಿ 2023ರಂದು ರಾಜ್ಯಾದ್ಯಂತ ಬಿಡುಗಡೆಯಾಗಲು ಸಜ್ಜಾಗಿದ್ದು, ಚಿತ್ರದ ಪ್ರಚಾರಕ್ಕೆ ಚಿತ್ರತಂಡ ಮೊನ್ನೆಯಷ್ಟೇ ವಿಜಯನಗರದ, ಹೊಸಪೇಟೆ ನಗರಕ್ಕೆ ತೆರಳಿತ್ತು.

ಈ ವೇಳೆ ಕಿಡಿಗೇಡಿಗಳ ಗುಂಪೊಂದು ವೇದಿಕೆ ಮೇಲೆ ನಿಂತಿದ್ದ ನಟ ದರ್ಶನ್‌ ಅವರ ಮೇಲೆ ಚಪ್ಪಲಿ ಎಸೆದಿರುವ ಕೃತ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ದರ್ಶನ್‌ ಅವರ ಅಭಿಮಾನಿಗಳು ಮಾತ್ರವಲ್ಲದೇ ಇಡೀ ಕನ್ನಡ ಚಿತ್ರರಂಗ ಬೆಂಬಲಕ್ಕೆ ನಿಂತಿದೆ.

ಇದನ್ನೂ ನೋಡಿ : https://fb.watch/hx63Uij7Hr/ ಜಯನಗರದ 48 ಆಸ್ತಿಗಳಲ್ಲಿ ಅತಿಕ್ರಮಣ ಮತ್ತು ಅಕ್ರಮ !

ಕ್ರಾಂತಿ ಚಿತ್ರದ ಮೊದಲ ಹಾಡನ್ನು ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಹಾಗೂ ಚಿತ್ರತಂಡ, ಅಭಿಮಾನಿಯೊಬ್ಬರ ಆಗಮನದ ಮೂಲಕ ಹಾಡನ್ನು ಬಿಡುಗಡೆಗೊಳಿಸಿತ್ತು.

ಅದೇ ರೀತಿಯಲ್ಲಿ ಚಿತ್ರದ ಎರಡನೇ ಹಾಡನ್ನು ಬಿಡುಗಡೆಗೊಳಿಸಲು ಉತ್ತರ ಕರ್ನಾಟಕದ, ಹೊಸಪೇಟೆ ನಗರಕ್ಕೆ ಇಡೀ ಕ್ರಾಂತಿ ಚಿತ್ರತಂಡ ಬಸ್ಸಿನಲ್ಲಿ ಆಗಮಿಸಿ,

ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಅಭಿಮಾನಿಗಳ ಮಧ್ಯೆ ಎರಡನೇ ಚಿತ್ರದ ಹಾಡನ್ನು ಅಭಿಮಾನಿಯೊಬ್ಬರಿಂದ ಬಿಡುಗಡೆಗೊಳಿಸಿತು.

ಈ ವೇಳೆ ವೇದಿಕೆಯ ಮೇಲೆ ನಿಂತಿದ್ದ ನಟ ದರ್ಶನ್‌ ನೆರದಿದ್ದ ಸಹಸ್ರಾರು ಸಂಖ್ಯೆಯ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಲು ಮುಂದಾದಾಗ ಪೊಲೀಸರ ಮುಂದೆಯೇ ಯುವಕರ ಗುಂಪೊಂದು ದರ್ಶನ್‌(kranthi movie tweet by sumalatha) ಅವರ ಮುಖಕ್ಕೆ ಚಪ್ಪಲಿಯನ್ನು ಎಸೆದು ಉದ್ಧಟತನ ಪ್ರದರ್ಶಿಸಿದ್ದಾರೆ.

ಚಪ್ಪಲಿ ವೇದಿಕೆಯ ಮೇಲೆ ಬೀಳುತ್ತಿದ್ದಂತೆ ಪೊಲೀಸರು ಚಪ್ಪಲಿಯನ್ನು ಕೆಳೆಗೆ ಎಸೆದು, ಕಿಡಿಗೇಡಿಗಳತ್ತ ಗಮನ ಹರಿಸಿದ್ದಾರೆ.

ದರ್ಶನ್‌ ಅವರು ಈ ಘಟನೆಗೆ ಹೆಚ್ಚು ಸ್ಪಂದಿಸದೇ, ಇರಲಿ ಪರವಾಗಿಲ್ಲ ಬಿಡಿ ಎಂದು ಹೇಳುವ ಮೂಲಕ ಸ್ಥಳದಿಂದ ಕೂಡಲೇ ಹೊರಟಿದ್ದಾರೆ.

ಇದನ್ನೂ ಓದಿ : https://vijayatimes.com/cbi-raid-on-dkc/

ಈ ಒಂದು ಘಟನೆಯ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವೀಡಿಯೋ ಟ್ವಿಟರ್‌(twitter) ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ.

ಈ ಒಂದು ವೀಡಿಯೊಗೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದು, ಕನ್ನಡ ಚಿತ್ರರಂಗದ ಅನೇಕ ನಟ-ನಟಿಯರು, ಹಿರಿಯ ಕಲಾವಿದರು ದರ್ಶನ್‌ ಅವರಿಗೆ ಬೆಂಬಲ ಸೂಚಿಸಿದ್ದಾರೆ.

ಈ ಘಟನೆ ಕುರಿತು ಹಿರಿಯ ನಟಿ, ಸಂಸದೆ ಸುಮಲತಾ ಅವರು ಟ್ವೀಟ್‌ ಮಾಡಿದ್ದು,

“ಯಾವುದೇ ನಿಜವಾದ ಅಭಿಮಾನಿ ಮಾಡದ ಕೃತ್ಯ ದರ್ಶನ್ ಮೇಲೆ ನಡೆದಿರುವ ಹಲ್ಲೆ. ಇದರಿಂದ ದರ್ಶನ್ ವರ್ಚಸ್ಸು, ಖ್ಯಾತಿಗೆ ಯಾವುದೇ ಕುತ್ತು ತರಲು ಸಾಧ್ಯವಿಲ್ಲ.

ಚಿತ್ರರಂಗಕ್ಕೆ ಕಪ್ಪು ಚುಕ್ಕಿ ಇಟ್ಟ ಈ ಘಟನೆ ಎಸಗಿದವರ ಸಣ್ಣತನ, ಹೇಡಿತನ ಮಾತ್ರ ಬಹಿರಂಗವಾಗಿದೆ.

ಇಡೀ ಚಿತ್ರರಂಗ ಕೃತ್ಯ ಖಂಡಿಸಿ ದರ್ಶನ್ ಬೆಂಬಲಕ್ಕೆ ನಿಂತಿದ್ದೇವೆ” ಎಂದು ಬರೆದು ಪೋಸ್ಟ್‌ ಮಾಡಿ, ನಟ ದರ್ಶನ್‌ ಅವರಿಗೆ ಸುಮಲತಾ ಬೆಂಬಲ ನೀಡಿದ್ದಾರೆ.

Exit mobile version