ಕೋವಿಡ್ ವಿರುದ್ಧ ಒಗ್ಗಟ್ಟಾಗಿ ಹೋರಾಡೋಣ: ದಲೈಲಾಮಾ

ಧರ್ಮಶಾಲಾ, ಮೇ. 26: ಕೊರೋನಾ ಸಾಂಕ್ರಾಮಿಕ ಸೇರಿದಂತೆ ಇತರ ಜಾಗತಿಕ ಬೆದರಿಕೆಗಳನ್ನು ಎದುರಿಸಲು ಎಲ್ಲರೂ ಒಗ್ಗೂಡಬೇಕು ಎಂದು ಟಿಬೆಟ್ನ ಅಧ್ಯಾತ್ಮ ಗುರು ದಲೈಲಾಮಾ ಅವರು ಹೇಳಿದ್ದಾರೆ.

ಬುದ್ಧಪೂರ್ಣಿಮೆಯ ಅಂಗವಾಗಿ ಮಾತನಾಡಿದ ಅವರು,‘ ಇತರರನ್ನು ಗೌರವಿಸುವುದು ಮತ್ತು ಬೇರೆಯವರ ಒಳಿತಿನ ಬಗ್ಗೆ ಕಾಳಜಿ ವಹಿಸುವ ಮೂಲಕ ನಮ್ಮಲ್ಲಿರುವ ಸ್ವಾರ್ಥ ಭಾವನೆಯನ್ನು ಕಡಿಮೆಗೊಳಿಸಬೇಕು. ಸ್ವಾರ್ಥ ಭಾವನೆಯೇ ಹೆಚ್ಚಿನ ಸಮಸ್ಯೆಗಳ ಮೂಲʼ ಎಂದಿದ್ದಾರೆ.

ʼಕೋವಿಡ್ನಿಂದಾಗಿ ವಿಶ್ವವು ಬಹಳ ನೋವನ್ನು ಅನುಭವಿಸಿದೆ. ಕೋವಿಡ್ ಸೇರಿದಂತೆ ಇತರೆ ಜಾಗತಿಕ ಸಮಸ್ಯೆಗಳನ್ನು ಒಟ್ಟಾಗಿ ಎದುರಿಸೋಣ. ಬುದ್ಧನ ಬೋಧನೆಗಳು ಕೇವಲ ಒಂದು ಗುಂಪು ಅಥವಾ ರಾಷ್ಟ್ರಕ್ಕೆ ಮಾತ್ರ ಸೀಮಿತವಲ್ಲ. ಜನರು ತಮ್ಮ ಇಚ್ಛೆ ಮತ್ತು ಸಾಮರ್ಥ್ಯಕ್ಕೆ ಅನುಸಾರ ಈ ಮಾರ್ಗವನ್ನು ಪಾಲಿಸಬಹುದು’ ಎಂದು ಅವರು ಹೇಳಿದರು

Exit mobile version