ಮೈಲಾರಲಿಂಗೇಶ್ವರನಿಗೆ ಬೆಳ್ಳಿ ಹೆಲಿಕಾಪ್ಟರ್ ಕಾಣಿಕೆ ನೀಡಿದ ಡಿಕೆಶಿ

ಬಳ್ಳಾರಿ, ಡಿ. 18: ಜಿಲ್ಲೆಯ ಸುಪ್ರಸಿದ್ಧ ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಶುಕ್ರವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಿಕುಮಾರ್​ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ವೇಳೆ ದೇಗುಲಕ್ಕೆ ಬೆಳ್ಳಿ ಹೆಲಿಕಾಪ್ಟರ್‌ ಅನ್ನು ಕಾಣಿಕೆ ನೀಡಿದರು.

ದೇವಸ್ಥಾನದಲ್ಲಿ ಡಿಕೆಶಿ ದೀರ್ಘದಂಡ ನಮಸ್ಕಾರ, ರುದ್ರಸ್ನಾನದ ವಿಧಿ ನೆರವೇರಿಸಿದರು. ಮೈಲಾರಲಿಂಗೇಶ್ವರನಿಗೆ ಪೂಜೆ ಸಲ್ಲಿಸಿ, 1 ಕೆ.ಜಿ‌ ತೂಕದ ಬೆಳ್ಳಿಯಿಂದ ಮಾಡಿರುವ ಹೆಲಿಕಾಪ್ಟರ್‌ ಕಾಣಿಕೆ ನೀಡಿ ಹರಕೆ ತೀರಿಸಿದರು.

ಬೆಳ್ಳಿ ಹೆಲಿಕಾಪ್ಟರ್‌ ನೀಡಿದ್ದೇಕೆ ಗೊತ್ತೆ?
2018ರಲ್ಲಿ ಮೈಲಾರಲಿಂಗೇಶ್ವರ ದೇವಸ್ಥಾನದ ಮೇಲೆ ಡಿ.ಕೆ.ಶಿವಕುಮಾರ್​ ಅವರ ಹೆಲಿಕಾಪ್ಟರ್ ಹಾದುಹೋಗಿತ್ತಂತೆ. ಇದರಿಂದ ದೇವರಿಗೆ ಅಪಚಾರ ಆಗಿತ್ತೆಂದು ಮತ್ತು ಡಿ.ಕೆ.ಶಿವಕುಮಾರ್​ಗೆ ಭಾರಿ ಸಮಸ್ಯೆಗಳು ಎದುರಾಗಿದ್ದವು ಎಂದು ಹೇಳಲಾಗಿತ್ತು. ಹೀಗಾಗಿ, ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಕಾಣಿಕೆ ನೀಡಿದರು.

Exit mobile version