ಮುಸ್ಲಿಮರ ಬಳಿ ಮಾವಿನ ಹಣ್ಣು ಖರೀದಿಸಬೇಡಿ ಎನ್ನುವುದು ರಾಷ್ಟ್ರದ್ರೋಹ : ಹೆಚ್‍ಡಿಕೆ!

kumarswamy

ಮುಸ್ಲಿಮರ(Muslim) ಬಳಿ ಮಾವಿನ ಹಣ್ಣು(Mango Fruit) ಖರೀದಿಸಬೇಡಿ ಎಂದು ಕೆಲ ಹಿಂದೂ ಸಂಘಟನೆಗಳು ಹೊಸ ಅಭಿಯಾನ ಆರಂಭಿಸಿವೆ. ಈ ಅಭಿಯಾನವನ್ನು ಜೆಡಿಎಸ್ ನಾಯಕ(JDS Leader) ಎಚ್.ಡಿ. ಕುಮಾರಸ್ವಾಮಿಯವರು(HD Kumarswamy) ತೀವ್ರವಾಗಿ ಖಂಡಿಸಿದ್ದಾರೆ.

ಮುಸ್ಲಿಮರ ಬಳಿ ಹಿಂದೂಗಳು ಮಾವಿನ ಹಣ್ಣು ಖರೀದಿಸಬೇಡಿ ಎನ್ನುವುದಕ್ಕಿಂತ ದೊಡ್ಡ ರಾಷ್ಟ್ರದ್ರೋಹ ಇನ್ನೊಂದಿಲ್ಲ. ಜನರನ್ನು ಒಡೆಯುವ ಕೆಲಸವನ್ನು ಬಿಜೆಪಿ ಹೀಗೆ ಮುಂದುವರೆಸಿದರೆ, ಇದೆಲ್ಲಾ ಬಿಜೆಪಿಗೆ ತಿರುಗುಬಾಣವಾಗಲಿದೆ ಎಂದು ಎಚ್ಚರಿಸಿದ್ದಾರೆ. ಬೆಂಗಳೂರಿನಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಇನ್ನು ಜನರೇ ಬಿಜೆಪಿಯನ್ನು ಓಡಿಸುತ್ತಾರೆ. ಶೀಘ್ರದಲ್ಲೇ ಈ ಕೆಲಸ ಪ್ರಾರಂಭವಾಗಲಿದೆ. ಇದೆಲ್ಲ ಹೇಗಿದೆ ಎಂದರೆ ಕಳ್ಳಕಾಕರು ಬರುತ್ತಿದ್ದಾರೆ. ಅವರನ್ನು ಒಡಿಸುತ್ತಾ ಇರಿ ಎಂದು ಹೇಳಿದ ಹಾಗಿದೆ.

ಎಲ್ಲದ್ದಕ್ಕೂ ಒಂದು ಅಂತ್ಯವಿರುತ್ತದೆ. ಬಿಜೆಪಿ ವಿರುದ್ಧ ಹಿಂದೂಗಳೇ ತಿರುಗಿ ಬೀಳುತ್ತಾರೆ ಕಾದು ನೋಡಿ. ಇನ್ನು ಮುಸ್ಲಿಮರು ಮಾವಿನ ಹಣ್ಣುಗಳ ಮೇಲೆ ಕೆಮಿಕಲ್ ಹಾಕುತ್ತಾರೆ ಎಂದು ಅನೇಕರು ಆಪಾಧನೆ ಮಾಡುತ್ತಿದ್ದಾರೆ. ಆದರೆ ಅನೇಕ ವರ್ಷಗಳಿಂದ ನಾವೆಲ್ಲಾ ಅದೇ ಹಣ್ಣುಗಳನ್ನು ತಿನ್ನುತ್ತಿದ್ದೇವೆ. ಇಂತಹ ವಿಷಯಗಳು ಚುನಾವಣೆ ಬಂದಾಗ ಮಾತ್ರ ಬರುತ್ತವೆ. ಮುಂಬರುವ ವಿಧಾನಸಭೆ ಚುನಾವಣೆಯ ಸಲುವಾಗಿ ಬಿಜೆಪಿ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ರಾಜಕೀಯ ಮಾಡುತ್ತಿದೆ. ಇದೆಲ್ಲಾ ಬಿಜೆಪಿಗೆ ತಿರುಗಿ ಬೀಳುತ್ತೇ… ಜನರೇ ಬಿಜೆಪಿಯನ್ನು ತಿರಸ್ಕರಿಸುತ್ತಾರೆ.

ಕೇವಲ ಮತಗಳಿಕೆಗಾಗಿ ಇದೆಲ್ಲಾ ನಡೆಯುತ್ತಿದೆ ಎಂದು ಕುಮಾರಸ್ವಾಮಿಯವರು ಕಿಡಿಕಾರಿದರು. ಮುಸ್ಲಿಮರ ಬಳಿ ಹಿಂದೂಗಳು ವ್ಯಾಪಾರ ಮಾಡಬೇಡಿ ಎನ್ನುವುದು ಅತ್ಯಂತ ದುರದೃಷ್ಟಕರ. ಈ ರೀತಿ ಮಾಡುವುದರಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ. ಮತಗಳಿಕೆಗಾಗಿ ಸಮಾಜವನ್ನು ಒಡೆಯುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿರುವ ಹಿಂದೂಗಳೇ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.

Exit mobile version