ಮತ್ತೆ `ಕೃಷ್ಣ’ನಾಗ್ತಾರೆ ಅಜಯ್ ರಾವ್!

ಕುರುಕ್ಷೇತ್ರ ಸಿನಿಮಾದಲ್ಲಿ ರವಿಚಂದ್ರನ್ ಕೃಷ್ಣನ ಪಾತ್ರ ಮಾಡಿರಬಹುದು. ಆದರೆ ಚಂದನವನದಲ್ಲಿ ಕೃಷ್ಣ ಎನ್ನುವ ಹೆಸರಿಗೆ ಕಟ್ಟು ಬಿದ್ದಿರುವ ನಟ ಇದ್ದರೆ ಅದು ಅಜಯ ರಾವ್ ಮಾತ್ರ! ಅದಕ್ಕೆ ಅವರ ಈ ಹಿಂದಿನ ಚಿತ್ರಗಳಾದ ‘ಕೃಷ್ಣನ್ ಲವ್ ಸ್ಟೋರಿ’, `ಕೃಷ್ಣ ಲೀಲಾ’ ಸಿನಿಮಾಗಳೇ ದೊಡ್ಡ ಉದಾಹರಣೆ. ಆ ಚಿತ್ರಗಳ ಮೂಲಕ ಅಜಯ್ ರಾವ್ ಜೊತೆಗೆ ಯಶಸ್ವಿ ಜೋಡಿಯಾಗಿ ಕಾಣಿಸಿಕೊಂಡಿದ್ದ ನಿರ್ದೇಶಕ ಶಶಾಂಕ್ ಇದೀಗ ಮತ್ತೆ ಒಂದಾಗಿದ್ದಾರೆ.

ನಿರ್ದೇಶಕ ಶಶಾಂಕ್ ಹೊಸ ಚಿತ್ರಕ್ಕೆ ಕತೆಯನ್ನು ಮಾತ್ರ ಬರೆದಿದ್ದಾರೆ. ಅಜಯ್ ರಾವ್ ಕೃಷ್ಣನ ಹೆಸರಲ್ಲೇ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಶೀರ್ಷಿಕೆಯಲ್ಲಿ ಕೂಡ ಕೃಷ್ಣ ಇರುತ್ತಾನ ಇಲ್ವ ಎನ್ನುವುದನ್ನು ಸದ್ಯದ ಮಟ್ಟಿಗೆ ಶಶಾಂಕ್ ಹೊರಗೆ ತಂದಿಲ್ಲ. ಅಂದಹಾಗೆ ಚಿತ್ರಕ್ಕೆ ನಿರ್ದೇಶನದ ಜವಾಬ್ದಾರಿಯನ್ನು ಶಂಕರ್ ಎನ್ನುವ ಹೊಸ ಪ್ರತಿಭೆಯ ಕೈಗೆ ನೀಡಲಾಗಿದೆ. ಚಿತ್ರದ ನಿರ್ಮಾಣವನ್ನು ಕನ್ನಡ ಚಿತ್ರರಂಗದ ಮತ್ತೋರ್ವ ನಿರ್ದೇಶಕ ಹಾಗೂ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿರುವ ಗುರುದೇಶಪಾಂಡೆ ಮಾಡುತ್ತಿದ್ದಾರೆ. ಗುರುದೇಶಪಾಂಡೆಯವರು ಈ ವರ್ಷದ ಜನಪ್ರಿಯ ಚಿತ್ರಗಳಲ್ಲಿ ಒಂದಾದ ಜಂಟ್ಲ್ ಮನ್’ ಚಿತ್ರವನ್ನು ನಿರ್ಮಿಸಿದ್ದರು. ಪ್ರಸ್ತುತ ಪೆಂಟಗಾನ್’ ಎನ್ನುವ ಮತ್ತೊಂದು ಚಿತ್ರವನ್ನು ಕೂಡ ಅವರೇ ನಿರ್ಮಿಸುತ್ತಿದ್ದಾರೆ. ಅಜಯ್ ರಾವ್ ಅವರ ಚಿತ್ರದ ಮುಹೂರ್ತ ಸದ್ಯದಲ್ಲೇ ನೆರವೇರಲಿದ್ದು ಅಂದೇ ಶೀರ್ಷಿಕೆಯನ್ನು ಹೊರತರಲಿದ್ದಾರೆ ಎನ್ನಲಾಗಿದೆ.

Exit mobile version