ಮತ್ತೆ ವಿಫಲಗೊಂಡ ಕೇಂದ್ರ ಸರ್ಕಾರ ಹಾಗೂ ರೈತರ ನಡುವಣ ಮಾತುಕತೆ

ನವದೆಹಲಿ, ಜ. 04: ರೈತ ಸಂಘಟನೆಗಳು ಮತ್ತು ಕೇಂದ್ರ ಸರ್ಕಾರದ ನಡುವೆ ಇಂದು ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಸಂಧಾನ ಸಭೆ ವಿಫಲವಾಗಿದೆ.

ಜನವರಿ 8 ರಂದು ಮತ್ತೊಮ್ಮೆ ಸಂಧಾನ ಸಭೆ ನಡೆಸುವ ಸಾಧ್ಯತೆ ಇದೆ ಎಂಬುದು ಕೇಳಿ ಬರುತ್ತಿದೆ. ಕೃಷಿ ಸಂಬಂಧಿತ ನೂತನ ಕಾಯ್ದೆಗಳನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿ ರೈತ ಸಂಘಟನೆಗಳು ನಡೆಸುತ್ತಿರುವ ಹೋರಾಟ 40 ದಿನಗಳಾದರೂ ಮುಂದುವರೆಯುತ್ತಲೇ ಇದೆ.

ಹೋರಾಟ ನಿರತ ರೈತರೊಂದಿಗೆ ಸರ್ಕಾರ ಈಗಾಗಲೇ 7 ಸಲ ಮಾತುಕತೆ ನಡೆಸಿದ್ದರೂ, ಪ್ರಯೋಜನವಾಗಿಲ್ಲ. ಇಂದು ರೈತ ನಾಯಕರೊಂದಿಗೆ ಮತ್ತೊಮ್ಮೆ ಸಭೆ ನಡೆಸಲಾಗಿದ್ದು, ಬೇಡಿಕೆ ಈಡೇರಿಕೆಗೆ ಸರ್ಕಾರ ಒಪ್ಪದ ಕಾರಣ ಸಭೆ ವಿಫಲವಾಗಿದೆ. ಮತ್ತೊಮ್ಮೆ ಚರ್ಚಿಸಲು ಜನವರಿ 8 ರಂದು ಸಭೆ ನಡೆಸಲಾಗುವುದು ಎನ್ನಲಾಗಿದೆ.

Exit mobile version