Bhopal: ಮಹತ್ವದ ಬೆಳವಣಿಗೆಯಲ್ಲಿ ಮಧ್ಯಪ್ರದೇಶ (Mohan Yadav new CM of MP) ಮುಖ್ಯಮಂತ್ರಿಯಾಗಿ ಉಜ್ಜೈನಿ ದಕ್ಷಿಣ ಕ್ಷೇತ್ರದ (Ujjain South Constituency) ಶಾಸಕ ಹಾಗೂ ಹಿಂದುಳಿದ
ವರ್ಗದ ಪ್ರಮುಖ ನಾಯಕ ಮೋಹನ್ ಯಾದವ್ ಅವರು ಆಯ್ಕೆಯಾಗಿದ್ದಾರೆ. ಈ ಹಿಂದಿನ ಶಿವರಾಜ್ ಸಿಂಗ್ ಚೌಹಾಣ ಸರ್ಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿಯೂ ಮೋಹನ್ ಯಾದವ್ ಅವರು
ಕಾರ್ಯನಿರ್ವಹಿಸಿದ್ದರು. ಮೋಹನ್ ಯಾದವ್ ಅವರು ಡಿಸೆಂಬರ್ 13 ಬುಧವಾರದಂದು ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇನ್ನು ಪಕ್ಷದ ಇಬ್ಬರು
ನಾಯಕರಾದ ಜಗದೀಶ್ ದೇವದಾ ಮತ್ತು ರಾಜೇಂದ್ರ ಶುಕ್ಲಾ ಉಪಮುಖ್ಯಮಂತ್ರಿಗಳಾಗಿ (Jagdish Devada and Rajendra Shukla Deputy Chief Ministers) ನೇಮಕ ಮಾಡಲಾಗಿದೆ.
ಅದೇ ರೀತಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮಾಜಿ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ (Narendra Singh Tomar) ಅವರ ಹೆಸರನ್ನು ರಾಜ್ಯ ವಿಧಾನಸಭೆಯ ಮುಂದಿನ
ಸ್ಪೀಕರ್ (Mohan Yadav new CM of MP) ಆಗಿ ಪಕ್ಷದ ನಾಯಕತ್ವ ನಿರ್ಧರಿಸಿದೆ.
ಮೋಹನ್ ಯಾದವ್ ಅವರ ಆಯ್ಕೆಯ ನಂತರ, ಯಾದವ್ ಮಧ್ಯಪ್ರದೇಶದ (Madya Pradesh) ನಿರ್ಗಮಿತ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ಶಿವರಾಜ್ ಸಿಂಗ್ ಚೌಹಾಣ್ (Shivraj Singh Chauhan) ಅವರು ಮೋಹನ್ ಯಾದವ್ ಅವರನ್ನು ಅಭಿನಂದಿಸುತ್ತಾ, “ಬಿಜೆಪಿ ಶಾಸಕಾಂಗ (BJP Legislature) ಪಕ್ಷದ ಸಭೆಯಲ್ಲಿ ಮಧ್ಯಪ್ರದೇಶದ
ಮುಖ್ಯಮಂತ್ರಿಯಾಗಿ ನಾಮನಿರ್ದೇಶನಗೊಂಡಿದ್ದಕ್ಕಾಗಿ ಕಠಿಣ ಪರಿಶ್ರಮದ ಸಹೋದ್ಯೋಗಿ ಮೋಹನ್ ಯಾದವ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಗೌರವಾನ್ವಿತ ಪ್ರಧಾನಿಯವರ ಸಮರ್ಥ
ಮಾರ್ಗದರ್ಶನದಲ್ಲಿ ನನಗೆ ವಿಶ್ವಾಸವಿದೆ. ಶ್ರೀ ನರೇಂದ್ರ ಮೋದಿಜೀ, (Narendra Modi) ನೀವು ಮಧ್ಯಪ್ರದೇಶವನ್ನು ಪ್ರಗತಿ ಮತ್ತು ಅಭಿವೃದ್ಧಿಯ ಹೊಸ ಎತ್ತರಕ್ಕೆ ಕೊಂಡೊಯ್ಯುತ್ತೀರಿ ಮತ್ತು ಸಾರ್ವಜನಿಕ
ಕಲ್ಯಾಣ ಕ್ಷೇತ್ರದಲ್ಲಿ ಹೊಸ ದಾಖಲೆಗಳನ್ನು ರಚಿಸುತ್ತೀರಿ. ಈ ಹೊಸ ಜವಾಬ್ದಾರಿಗಾಗಿ ಅನೇಕ ಅಭಿನಂದನೆಗಳು ಮತ್ತು ಶುಭಾಶಯಗಳು ಎಂದು ಟ್ವೀಟರ್ನಲ್ಲಿ ಬರೆದುಕೊಂಡಿದ್ದಾರೆ.
230 ಸದಸ್ಯ ಬಲದ ಮಧ್ಯಪ್ರದೇಶದ ವಿಧಾನಸಭೆಯಲ್ಲಿ 163 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಅಧಿಕಾರವನ್ನು ಉಳಿಸಿಕೊಂಡರೆ, ಕಾಂಗ್ರೆಸ್ 66 (Congress) ಸ್ಥಾನಗಳೊಂದಿಗೆ ಎರಡನೇ ಸ್ಥಾನವನ್ನುಗಳಿಸಿದ್ದು,
ಹಿಂದಿನ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ ಅವರ 18 ವರ್ಷಗಳ ಆಡಳಿತಕ್ಕೆ ಕೊನೆ ಹಾಡಿರುವ ಬಿಜೆಪಿ ಹೈಕಮಾಂಡ್, ಮುಂದಿನ ಲೋಕಸಭಾ ಚುನಾವಣೆಲ್ಲಿ (Lok Sabha elections) ಶಿವರಾಜ್ ಸಿಂಗ್
ಚೌಹಾಣ ಅವರನ್ನು ಸ್ಪರ್ಧಿಗಿಳಿಸುವ ಲೆಕ್ಕಾಚಾರದಲ್ಲಿದೆ. 2024ಕ್ಕೆ ಮತ್ತೊಮ್ಮೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಶಿವರಾಜ್ ಸಿಂಗ್ ಚೌಹಾಣ ಅವರು ಕೇಂದ್ರದಲ್ಲಿ ಮಂತ್ರಿಯಾಗುವ ಅವಕಾಶ ಸಿಗಲಿದೆ.
ಇದನ್ನು ಓದಿ : ಗಾಂಧಿವಾದವನ್ನು ಕಿತ್ತೊಗೆಯಬೇಕು – ನಟ ಚೇತನ್ ಅಹಿಂಸಾ ಆಗ್ರಹ